logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

Advanced Search

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.
ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯು ದಿನಾಂಕ :19-09-2023 ರಂದು ರಾಣೇಬೆನ್ನೂರ್ ತಾಲ್ಲೂಕಿನ ಮಾಕನೂರ್ ಗ್ರಾಮದಲ್ಲಿ ನಡೆಯಿತು. ಕಾರ್ಯದಲ್ಲಿ ರಾಣೇಬೆನ್ನೂರ್ ನ ಶಾಸಕರಾದ ಶ್ರೀ ಮಾನ್ಯ ಪ್ರಕಾಶ ಕೋಳಿವಾಡ್ ರವರು ಮತ್ತು ಜಿಲ್ಲಾ ಹಂತದ ಅಧಿಕಾರಿಗಳು ಭಾಗವಸಿದ್ದರು. ಉದ್ಘಾಟನೆ ಅದ್ದೂರಿಯಾಗಿ ನಡೆಯಿತು. ಆದರೆ ಹೆಚ್ಚಿನ ಖೋ ಖೋ ಪಂದ್ಯಗಳಲ್ಲಿ ಜಗಳಗಳೇ ಸಂಭವಿಸಿದ್ದು ದುರದೃಷ್ಟಕರ. ಕಷ್ಟ ಪಟ್ಟು ಮಕ್ಜಳನ್ನು ಆಟಕ್ಕೆ ಅಣಿಗೊಳಿಸಿ ಕರೆದುಕೊಂಡು ಬಂದರೆ, ಇಲ್ಲಿ ನಡೆದುದೆ ಬೇರೆಯಾಗಿತ್ತು. ಇವು ಇಲಾಖೆಯ ಕ್ರೀಡಾಕೂಟ ದ ಬದಲಾಗಿ ಸ್ವಂತ ಗ್ರಾಮದಲ್ಲಿ ನಡೆದ ಕ್ರೀಡಾಕೂಟದಂತೆ ಭಾಸವಾಗಿತ್ತು. ಇಲಾಖೆಯ ನಿಯಮಾವಳಿಗಳಿಗೆ ತಕ್ಕಂತೆ ನಡೆಯದೆ ಅವ್ಯವಸ್ಥೆ ಯ ಆಗರವಾಗಿತ್ತು. ಈಗಾಗಲೇ ಇದರ ಬಗ್ಗೆ ಜಿಲ್ಲೆಯ 2 or 3 ತಾಲೂಕಿನವರು ಹಾವೇರಿ ಜಿಲ್ಲಾ ಉಪನಿರ್ದೇಶಕರಿಗೆ ದೂರನ್ನು ನೀಡಲಾಗಿದೆ ಎಂಬ ಮಾಹಿತಿಯ ಜಾಡು ಹಿಡಿದಾಗ ಹಾನಗಲ್ ಶಿಗ್ಗಾಂವ್ ಮತ್ತು ಬ್ಯಾಡಗಿ ತಂಡಗಳ ಊರಿನವರು ದೂರು ದಾಖಲಿಸಿದ್ದು ತಿಳಿದುಬಂದಿದೆ. ದೂರು ಕೊಟ್ಟ ಹಾನಗಲ್ ತಾಲೂಕಿನ ಬ್ಯಾತನಾಳ ಗ್ರಾಮದವರನ್ನು ಸಂಪರ್ಕಿಸಿದಾಗ ನಮಗೆ ಅಂಪೈರ್ ರವರನ್ನು ಇಲಾಖೆಯವರಿಗೆ ಆಧ್ಯತೆ ಕೊಡದೆ ಹೊರಗಿನವರಿಂದ ಆಟ ಆಡಿಸಲಾಯಿತು. ಮಾಕನೂರ್ ಹಾಗೂ ಅಂಗರಗಟ್ಟಿ ತಂಡದ ನಡುವೆ ಹಣಾಹಣಿ ನಡೆದಾಗ ಅವರುಗಳು ಸಂಪೂರ್ಣ ಏಕಮುಖವಾಗಿ ತೀರ್ಪು ನೀಡಲಾಗಿದೆ. ನಮ್ಮ ತಂಡ ವಿಜಯಶಾಲಿ ಯಾಗುವಂತಿದ್ದರು ನಿರ್ಣಾಯಕರ ವ್ಯವಸ್ಥಿತ ಪಿತೂರಿಯಿಂದ ಸೋಲುವಂತಾಯಿತು. ಅದಕ್ಕೆ ಸಂಬಂಧಿಸಿದ video ಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಶಿಗ್ಗಾಂವ್ ಹಾಗೂ ಬ್ಯಾಡಗಿ ತಂಡದವರನ್ನು ಕೇಳಿದಾಗ ಅವರು ಸಹಿತ ಮೇಲಿನಂತೆ ದೂರು ಹೇಳಿದ್ದಲ್ಲದೆ. ಸವಣೂರ ತಾಲೂಕಿನ ತಂಡದಲ್ಲಿ ವಯಸ್ಸಿಗೆ ಮೀರಿದ ಮತ್ತು ಶಾಲೆಯಲ್ಲಿ ಇಲ್ಲದ ಮಕ್ಕಳನ್ನು ಹಾಕಿಕೊಂಡು ಆಡಿಸಿದ್ದು ಮುಂದಿನ ಪಂದ್ಯದಲ್ಲಿ ದೃಢಪಟ್ಟರೂ ಆ ತಂಡದ ವಿರುದ್ಧ ಕ್ರಮಕೈಗೊಳ್ಳದೆ ಬ್ಯಾಡಗಿ ತಾಲೂಕಿನ ತಂಡದಲ್ಲಿ ಆಡಿದ ಸುಮಾರು 4 ವಿದ್ಯಾರ್ಥಿಗಳನ್ನು ತೆಗೆಸಿ ಆಡಿಸಲಾಯಿತು. ಇದರಬಗ್ಗೆ ನ್ಯಾಯ ಕೇಳಿದರೆ, ನೀವು ಮೊದಲೇ ಅಬ್ಜೆಕ್ಷನ್ ಮಾಡಬೇಕಿತ್ತು. ಎಂದು ಪೊಲೀಸ್ ಪಿಎಸ್ಐ ರವರನ್ನು ಕರೆಯಿಸಿ ನಮ್ಮ ಹುಡುಗರ ಮೇಲೆ ದಬ್ಬಾಳಿಕೆ ಮಾಡಿಸಿರುತ್ತಾರೆ. ಬಂದ ಪಿಎಸ್ ಐ ನಮ್ಮನ್ಯಾಯಯುತವಾದ ಹೋರಾಟಕ್ಕೆ ಅಡ್ಡಿಪಡಿಸಿ ಗ್ರಾಮದ ಮಕ್ಕಳಿಗೆ ಬಾಯಿಗೆ ಬಂದಂತೆ ಬೈದುದಲ್ಲದೆ ಒಬ್ಬ ವಿದ್ಯಾರ್ಥಿಗೆ ಹೊಡೆದು ಶಿಕ್ಷಕರಿಗೆ ಬಾಯಿಗೆ ಬಂದಂತೆ ಮಾತನಾಡಿ ದೌರ್ಜನ್ಯದಿಂದ ನಮ್ಮನ್ನು ಮೈದಾನದ ಹೊರಗೆ ಹಾಕಿದ್ದಾರೆ ಎಂದು ತಿಳಿಸಿದರು. ಪಿಎಸ್ ಐ ಬಾಲಕನಿಗೆ ಹೊಡೆದಾಗ ಮಕ್ಕಳ ತಾಯಂದಿರು ಪ್ರತಿಭಟಿಸಿದಾಗ ತಾಯಂದಿರಿಗೂ ಮಹಿಳೆಯರನ್ನದೇ ಬಾಯಿಗೆ ಬಂದಂತೆ ಬೈದಿದ್ದಾರೆ. ಎಂದು ಊರ ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೆ ಶಿಗ್ಗಾಂ ವ್ ತಂಡದವರದು ನಿರ್ಣಾಯಕರ ತಪ್ಪಿನಿಂದ ನಮ್ಮ ತಂಡ ಸೋತಿದೆ ಎಂದು ದೂರಿದ್ದಾರೆ. ಅಲ್ಲದೆ ಬಾಲಕಿಯರ ಆಟದಲ್ಲೂ ಕೈ ಕೈ ಮಿಲಾಯಿಸಿ, ಹೊಡೆದಾಡಿದಂತಹ ಜಗಳಗಳು ನಡೆದಿವೆ. ಹೀಗಾಗಿ ದೂರುಗಾರರ ಪ್ರಮುಖ ಬೇಡಿಕೆ ಏನೆಂದರೆ ಜಿಲ್ಲಾ ಮಟ್ಟದ ಖೋ ಖೋ ಆಟಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಡಿಸದೆ, ತಂಡ ಗೆದ್ದಂತಹ ಊರಿನಲ್ಲಿ ಇಟ್ಟಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಲೋಕಲ್ ಪ್ರಭಾವದಿಂದ ನಮ್ಮ ತಂಡಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ಈ ಆಟಗಳನ್ನು ರದ್ದುಪಡಿಸಿ ಜಿಲ್ಲಾ ಹಂತದಲ್ಲಿ ನಡೆಸಿಕೊಡಬೇಕೆಂದು ವಿನಂತಿ ಮಾಡಿಕೊಂಡಿರುತ್ತಾರೆ. ಅಲ್ಲದೆ ಅಂದು ಹಾಜರಿದ್ದ ಪಿಎಸ್ ಐ ಮೇಲೆ ದೌರ್ಜನ್ಯ ಕೇಸು ದಾಖಲಿಸಬೇಕೆಂದು ಕೇಳಿಕೊಂಡಿರುತ್ತಾರೆ. ನ್ಯಾಯಯುತವಾಗಿ ಆಟ ಆಡಿಸಿದಾಗ ಮಾತ್ರ ಮತ್ತೆ ಮುಂದಿನವರ್ಷ್ ಪ್ರಯತ್ನ ಮಾಡಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ತಮಗೆ ಬೇಕಾದವರಿಗೆ ನಿರ್ಣಯ ಕೊಡುವಂತಿದ್ದರೆ ಮಕ್ಕಳಿಗೆ ಅನ್ಯಾಯ ಮಾ ಡಿದಂತಾಗುತ್ತದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ ಮಾನ್ಯ ಜಿಲ್ಲಾ ಉಪನಿರ್ದೇಶಕರು ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು ಸೂಕ್ತ ಕ್ರಮ ಕೈಗೊಂಡು ಮಕ್ಕಳಿಗೆ ನ್ಯಾಯ ಕೊಡಿದಸಬೇಕೆಂಬುದು ಶಿಕ್ಷಕರ ಕ್ರೀಡಾಭಿಮಾನಿಗಳ ಮಾನವೀಯಗಿದೆ.

Apr 05, 2021 at 9:48 am

ಆಲಸ್ಯದ ತ್ಯಾಗ

*


*ಆಲಸ್ಯದ ತ್ಯಾಗ*



ಮಳೆ ಸುರಿಸುವ ಕಾಲಕೆ ಹದವಾಗದ ಧರೆಯಿಂದು

ಕಳೆ ಬೆಳೆದು ಕವಲೊಡೆದು

ನಿಂತಿಹದಿಂದು

ಕರ್ಮವ ಮರೆತು ಕಾಲದ ತುತ್ತಿಗೆ ಶರಣಾಗಿಂದು

ಆಗಿಹರು ಯುವ ರೈತರು ಆಲಸ್ಯದ ಗುಲಾಮರಿಂದು



ಬಿತ್ತುವ ಹೊತ್ತಲಿ ಶಾಸ್ತ್ರವ ಮರೆತು

ಹೊತ್ತಿಸಿ ಅಗ್ನಿಯ ಮಾಂಸವ ಬೇಯಿಸಿ

ಚೆಲ್ಲಿಸಿ ರಕ್ತವ ಸೇವಿಸಿ ಮಧ್ಯವ

ಫಲವನು ಕೊಡಲು ಧರೆಯ ಕೇಳುತಿಹರು 



ಸೊರಗುತಿದೆ ಧರೆಯು ಕಾಲ ಗತಿಸಿದಂತೆ

ಕೊರಗುತಿದೆ ಮೇಲ್ಪದರ ರಸಾಯನಿಕ ವಿಷವನುಂಡು 

ನಶಿಸುತಿದೆ ಪೂರ್ವಜರ ಊಳುವ ಬಗೆಯು

ಕಳೆಯುತಿದೆ ಧರೆಯ ಫಲವತ್ತತೆಯ ಫಲವು


ಉದಯ ಪೂರ್ವದಲಿ ನಿನ್ನೊಡೆಯನ ನೀ ನೆನೆದು

ಬಸವನ ಕಾಲ್ ಕಸ ಕಣ ಕಣವ ನೀ ತೆಗೆದು

ಅದರೊಡಲವ ತುಂಬಿಸಿ ನೀರಡಿಕೆಯ ನೀಗಿಸಿ

ನಿನ್ನಷ್ಟೇ ಶುಚಿಯಾಗಿಡು ಧರೆ ಊಳುವ ಧನಿಯನ ನೀ



ಕದಡಿದ ಕಡ್ಡಿಗಳ ಒಗ್ಗೂಡಿಸಿ ಕಟ್ಟಿ

ಮುದಡಿದ ಎಲೆಗಳ ಗೂಡಿಸಿ ಇಟ್ಟು

ಹರಡಿದ ಸಗಣಿಯ ಅದರ ಮೇಲೊಟ್ಟಿ

ಸಾವಯವ ಗೊಬ್ಬರವ ಮಾಡು ನೀ ಸೃಷ್ಠಿ


ವ್ಯಯಿಸದಿರು ಕಾಲವ ಹರಟೆ ಕಟ್ಟೆಯನೇರಿ 

ಸವಿಸು ಅಮೂಲ್ಯ ಹೊತ್ತನು ಅನುಭವಿಗಳ ಸಂಗಡ 

ಮನಬಿಚ್ಚಿ ಕೇಳು ಧರೆಯನೊಲಿಸುವ ಪರಿಯನ 

ಸುರಿಸುವರು ನಿನಗೆ ಸಾಗರದಷ್ಟು ಅರಿವನ್ನ


ಹಿಂಡು ನೀ ಬೆವರ ಹನಿಗಳ ಹೊಳೆಯ

ಒದ್ದೆಯಾಗಿ ಒಡೆಯಲಿ ರಾಶಿ ರಾಶಿ ಹೆಂಟೆಯ

ಚಿಗುರೊಡೆದು ಪುಟಿದೆದ್ದು ಬರುವುದು

ಮನ ಮನೆ ತುಂಬುವ ನಗ ನಾಣ್ಯ ರಾಶಿಯು

  

ಆಕಳಿಕೆಯ ಅಳಿಸಿ ಆಲಸ್ಯವಾ ತೊರೆದು

ಬಿಕ್ಕಳಿಕೆಗೆ ನೀರುಣಿಸಿ ಪುಟಿದೆದ್ದು ನೀನಿಂತು

ಕುಲಕಸಬನು ಹೊತ್ತು ಗರ್ವದಿಂ ಸಾಗಿಂದು ನೀ 

ಒಲಿದಪ್ಪಿಕೊಳ್ಳುವುದು ಧರೆಯು ನಿನ್ನ


ಶ್ರೀ ಎಂ ಎಚ್ ಲಷ್ಕರಿ 

ಶಿಕ್ಷಕರು ನಿಡಗುಂದಿ

Apr 05, 2021 at 9:48 am

ನೊಂದ ರೈತರಿಗೆ ಮತ್ತೆ ಕಣ್ಣು ತೆರೆದ ರಾಜ್ಯ ಸರ್ಕಾರ
ಉತ್ತರ ಕನ್ನಡ -: ವೀಕ್ಷಕರೇ 2022 ಇಸ್ವಿಯಲ್ಲಿ ಅನೇಕ ರೋಗದಿಂದ ಮತ್ತು ಹವಾಮಾನದಿಂದ ಮಾವು ಬೆಳೆಗೆ ಏನು ಕೂಡ ಲಾಭವಿಲ್ಲದೆ ರೈತರು ನಂದು ಹೋಗಿದ್ದರು ಈಗ ಮತ್ತೆ ತೋಟಗಾರಿ ಇಲಾಖೆಯಿಂದ ಸಿಹಿ ಸುದ್ದಿ. 2023 ಮುಂಗಾರು  ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರದಿಂದ ಮಂಜೂರಾತಿ ನೀಡಲಾಗಿದ್ದು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳ ಗ್ರಾಮ ಪಂಚಾಯತಿಗಳನ್ನು. (Insurance Unit-IU) ಮಾವು ಬೆಳೆ ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿರುತ್ತದೆ. ನೊಂದಣಿಗೆ ಅಗತ್ಯ ದಾಖಲೆಗಳು 1) ನಿಗದಿತ ಅರ್ಜಿ ನಮೂನೆ 2) ಜಮೀನಿನ ಪಹಣಿ ( ಬೆಳೆ ನೊಂದಾವಣೆ ಇರುವ ) 3) ಬ್ಯಾಂಕ್ ಉಳಿತಾಯ ಖಾತೆ 4) ಆಧಾರ್ ಕಾರ್ಡ್ 5) ನಿಗದಿತ ಸ್ವಯಂ ಘೋಷಣೆ 6) ನಾಮಿನಿ ಇವರಣೆ, ಬೆಳೆ ಸಾಲ ಪಡೆಯುವ (Loanee) ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ನೋಂದಾವಣೆಗೆ. 31/07/2023 ಅಂತಿಮ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿ. ಗ್ರಾಮ ಒನ್ ಕೇಂದ್ರ ಹಾಗೂ ಸಹಾಯಕ ತೋಟಗಾರಿಕೆ ಹಾಗೂ ರೈತ ಸಂಪರ್ಕ ಕೇಂದ್ರ ಹಳಿಯಾಳ. ಮುರಕವಾಡ. ಸಾಮ್ರಾಣಿ ದಾಂಡೇಲಿ ರೈತರು ಸಂಪರ್ಕಿಸಬಹುದು ಬೆಳೆವಾರು ವಿಮಾ ಮೊತ್ತ. ಕಂತು ಮತ್ತು. ರೈತರ ಬೆಳೆದ ಮಾವುಗೆ. ಒಟ್ಟು ವಿಮಾ ಮೊತ್ತ ಒಂದು ಎಕರೆಗೆ 32.000 ಸಾವಿರ ಆದರೆ ರೈತರು ಪಾವ ಪಾವತಿಸಬೇಕಾದ ವಿಮಾ ಕಂತಿನ ದರ 5% ಅಂದ್ರೆ ರೈತರು ಪಾವತಿಸಬೇಕಾದ ಒಟ್ಟು ವಿಮಾಕಂತೂ ಪ್ರತಿ ಎಕರೆಗೆ ಎಕ್ಕರೆಗೆ 1600 ನೂರು ರೂಪಾಯಿ ಇದೊಂದು ನಾವು ಬೆಳೆದ ರೈತರಿಗೆ ಭವಿಷ್ಯ ಬದಲಾವಣೆ ಆಗಬಹುದು.

Apr 05, 2021 at 9:48 am

ಕಿತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಬಾಬಾಸಾಹೇಬ ಪಾಟೀಲ ಹುಟ್ಟುಹಬ್ಬದ ನಿಮಿತ್ಯ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಹಂಚಲಾಯಿತು.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕಿತ್ತೂರು ಶಾಸಕರಾದ ಶ್ರೀ ಬಾಬಾಸಾಹೇಬ್ ಪಾಟೀಲ ಅವರ ಹುಟ್ಟು ಹಬ್ಬದ ನಿಮಿತ್ಯ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲಗಳ  ಕಿಟ್ಗಳನ್ನ  ಹಂಚಲಾಯಿತು.ಈ ಸಂದರ್ಭದಲ್ಲಿ ಹುಣಸಿಕಟ್ಟಿ ಗ್ರಾಮ ಪಂಚಾಯತಿ ಸದಸ್ಯರಾದ ಕಲ್ಮೇಶ ನಾಡಗೌಡರು, ಸಚಿನ್ ಯರಗೊಪ್ಪ, ಹಾಗೂ ಗ್ರಾಮದ ಮುಖಂಡರಾದ ಮೆಹಬೂಬ್ ಗಡಾದ ಹಾಗೂ ಗ್ರಾಮದ ಪ್ರಮುಖರು ಯುವಕರು ಮತ್ತಿತರು ಉಪಸ್ಥಿತರಿದ್ದರು.

Apr 05, 2021 at 9:48 am

ಅಪರೂಪದ ದೃಶ್ಯ ಬೆಕ್ಕಿನ ಮರಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ಮೆರೆದ ಹಂದಿ.
ನಿಡಗುಂದಿ -: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಕಂಡು ಬಂದ ಅಪರೂಪದ ಒಂದು ದೃಶ್ಯ. ಹಸಿದ ಹೊಟ್ಟೆಗೆ ಅನ್ನ ನೀಡುವುದು ಮಾನವ ಧರ್ಮವಾಗಿದ್ದು, ಇದು ಅನಾದಿ ಕಾಲದಿಂದಲೂ ನಮಗೆ ರಕ್ತಗತವಾಗಿ ಬಂದಿದೆ. ಹಸಿದ ಹೊಟ್ಟೆಗೆ ಅನ್ನ ನೀಡಿ ಆ ಜೀವವನ್ನು ಸಂತುಷ್ಟಗೊಳಿಸಿದರೆ ಅದರಿಂದ ಪುಣ್ಯಫಲ ದೊರೆಯುತ್ತದೆ ಎಂಬ ನಂಬಿಕೆಯೂ ನಮ್ಮಲ್ಲಿದೆ. ಮಾನವರಾದ ನಾವು ಬುದ್ದಿವಂತ ಪ್ರಾಣಿಗಳು, ಹಾಗಾಗಿ ಪಾಪ ಪುಣ್ಯದ ಲೆಕ್ಕಾಚಾರದಲ್ಲಿ ಒಂದಷ್ಟು ಒಳ್ಳೆ ಕೆಲಸ ಮಾಡುತ್ತೇವೆ. ಆದರೆ ಇಲ್ಲಿ ಮೂಕ ಪ್ರಾಣಿಯಾದ ಹಂದಿಯೊಂದು ಯಾವ ಫಲಾಪೇಕ್ಷೆಯಿಲ್ಲದೆ ಹಸಿದ ಬೆಕ್ಕಿಗೆ ಹಾಲುಣಿಸಿ ತನ್ನ ತಾಯ್ತನವನ್ನು ಧಾರೆ ಎರೆಯುತ್ತಿರುವ ದೃಶ್ಯವೊಂದು ಅಚ್ಚರಿ ಮೂಡಿಸುತ್ತಿದೆ.ಬೀದಿಯಲ್ಲಿ ಮರಿಗಳಿಗೆ ಜನ್ಮನೀಡಿದ ತಾಯಿ ಬೆಕ್ಕೊಂದು ಆಹಾರ ಅರಸುತ್ತಾ ಹೊರಟು ಹೋಗಿದ್ದು, ಇತ್ತ ತಾಯಿಯ ಬರುವಿಕೆಗಾಗಿ ಕಾದು ಹಸಿವಿನಿಂದ ಬಳಲಿ ಬೆಂಡಾದ ಮರಿಗಳು ಅದೇ ದಾರಿಯಲ್ಲಿ ಮಲಗಿದ್ದ ಹಂದಿಯೊಂದನ್ನು ಸುತ್ತುವರೆದು ಹಾಲಿಗಾಗಿ ಹಂಬಲಿಸಿವೆ. ಹಸಿವಿನಿಂದ ಪರಿತಪಿಸುತ್ತಿದ್ದ ಮರಿಗಳನ್ನು ನೋಡಿದ ತಾಯಿ ಹಂದಿಯ ಮನಕರಗಿದೆ. ಇವು ನನ್ನ ಮರಿಗಳಲ್ಲ ಎಂಬುವುದು ಗೊತ್ತಿದ್ದರೂ ಪ್ರತಿರೋಧ ಮಾಡದೆ ಹಾಲುಣಿಸುತ್ತಾ ತನ್ನ ತಾಯ್ತನವನ್ನು ಮೆರೆದಿದೆ ಎಲ್ಲಿ ನಮ್ಮ ಸೌಂದರ್ಯ ಹಾಳಾಗುತ್ತೋ ಎಂಬ ಭಯದಲ್ಲಿ ಕೆಲವು ಮಹಿಳೆಯರು ತಾವು ಹೆತ್ತ ಮಕ್ಕಳಿಗೆ ಹಾಲುಣಿಸಲು ಹಿಂದೇಟು ಹಾಕುವ ಇಂದಿನ ದಿನಗಳಲ್ಲಿ ಹಂದಿಯ ಮಾತೃ ವಾತ್ಸಲ್ಯವನ್ನು ಮೆಚ್ಚಲೇಬೇಕು. ಇಂತಹವೊಂದು ಅಪರೂಪದ ಚಿತ್ರವನ್ನು ಸರೆಹಿಡಿದಿದ್ದು ನಮ್ಮ ಪತ್ರಿಕೆಯ ಹೆಮ್ಮೆ.

Apr 05, 2021 at 9:48 am

ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಶ್ರಮ
ನಿಡಗುಂದಿ -: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸ್ಥಳೀಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಡಗುಂದಿ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸೋಣ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು . ಈ ಒಂದು ಕಾರ್ಯಕ್ರಮಕ್ಕೆ ಶ್ರೀ ಬಿ ಟಿ ಗೌಡರ ನಿಕಟ ಪೂರ್ವ ಜಿಲ್ಲಾ ಅಧ್ಯಕ್ಷರು KSPSTA ವಿಜಯಪುರ ಮತ್ತು ಶ್ರೀ ಪ್ರಕಾಶ ಗೋಡಖಂಡಿಕಿ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ನಿಡಗುಂದಿ.ಇವರು ಹಸಿರು ನಿಶಾ ನೆ ತೋರಿಸಿ ಜಾತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಘಟಕದಿಂದ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಕ್ಷಯರೋಗ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಎಸ್ ಎಸ್ ಮೇಟಿ ಆರೋಗ್ಯ ಶಿಕ್ಷಣಾಧಿಕಾರಿಗಳು ಬಸವನ ಬಾಗೇವಾಡಿ ಇವರು ಸರ್ಕಾರದ ಉದ್ದೇಶ ಈಡೇರಿಸಲು ಶ್ರಮಿಸುವ ಆಡಳಿತ ವರ್ಗದ ಕಾರ್ಯಕ್ಕೆ ಜನರ ಸಹಕಾರ ಅಗತ್ಯ ಎಂದರು. ಎರಡು ವಾರಕ್ಕೂ ಹೆಚ್ಚು ಕಾಲ ಕೆಮ್ಮು, ಜ್ವರ, ಹಸಿವು ಆಗದಿರುವುದು, ಕಫದಲ್ಲಿ ರಕ್ತ ಬೀಳುವುದು, ಎದೆನೋವು ಕಾಣಿಸಿಕೊಳ್ಳುವುದು ರೋಗದ ಲಕ್ಷಣಗಳು. ಈ ಬಗ್ಗೆ ಎಚ್ಚರ ವಹಿಸಬೇಕು. ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಈ ಕಾಯಿಲೆ ಏಡ್ಸ್-ಮಧುಮೇಹ ಇರುವವರಿಗೆ ಬಹುಬೇಗ ಹರಡುತ್ತದೆ ಎಂದು ತಿಳಿಸಿದರು. ನಂತರ ಶ್ರೀ ಬಿ ಟಿ ಗೌಡರ ನಿಕಟ ಪೂರ್ವ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಜಯಪುರ ಮಾತನಾಡಿ, ಕ್ಷಯ ಟ್ಯೂಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಇದು ಸೋಂಕಿದ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಉಗುಳಿದಾಗ ಹಾಗೂ ಗಾಳಿ ಮೂಲಕ ಬೇರೊಬ್ಬರಿಗೆ ಹರಡುತ್ತದೆ. ಸಕಾಲಕ್ಕೆ ಚಿಕಿತ್ಸೆ ಪಡೆಯದಿದ್ದರೆ ವರ್ಷದಲ್ಲಿ 10-15 ಜನರಿಗೆ ರೋಗ ಹರಡುತ್ತದೆ ಎಂದು ಹೇಳಿದರು. ಕ್ಷಯದ ಬಗ್ಗೆ ಜನರಿಗೆ ತಿಳಿಸಲಿಕ್ಕಾಗಿ ಪ್ರತಿ ಹಳ್ಳಿಗಳಲ್ಲೂ ಜಾಗೃತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಬಿ ಟಿ ಗೌಡರ.ಶ್ರೀ ಎಸ್ ಎಸ್ ಮೇಟಿ.ಶ್ರೀ ಎಂ ಎನ್ ಪೂಜಾರಿ.ಶ್ರೀ ಆರ್ ಜಿ ಬುಲಾತಿ.ಶ್ರೀ ಎ ಜಿ ಮುಕಾರ್ಥಿಹಾಳ. ಜಿ ವಿ ಹೂಗಾರ. ಶ್ರೀ ಎಸ್ ಕೆ ದೊಡ್ಡಮನಿ. ಬಸವರಾಜ ಚಿಕ್ಕಬೆವೂನೂರ. ಜಗದೀಶ್ ಮುಚ್ಚಂಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Apr 05, 2021 at 9:48 am

ಬಾಳ ಬೆಳಗುವ ವಿದ್ಯಾ ಸಂಸ್ಥೆಗೆ ಸುವರ್ಣ ಮಹೋತ್ಸವ.

ಐದು ದಶಕಗಳಿಂದ ಅರಿವಿನ ಜ್ಯೋತಿಯಾಗಿ ಬೆಳಗುತ್ತಾ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಅನುಪಮಾ ಸೇವೆ ಸಲ್ಲಿಸುತ್ತಿರುವ ಪಟ್ಟಣದ ನಾಯಕ ಶಿಕ್ಷಣ ಸಂಸ್ಥೆಯ ನ್ಯೂ ಇಂಗ್ಲಿಷ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 50ನೇ ಸುವರ್ಣ ಮಹೋತ್ಸವದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸ್ಥಳೀಯ ಶಿಕ್ಷಣ ಸಂಸ್ಥೆಯಾದ ನಾಯಕ್ ಶಿಕ್ಷಣ ಸಂಸ್ಥೆಯ ನ್ಯೂ ಇಂಗ್ಲಿಷ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 50ನೇ ಸುವರ್ಣ ಮಹೋತ್ಸವದ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು , 1973ರ ಜುಲೈ 14ರಂದು 42 ವಿದ್ಯಾರ್ಥಿಗಳನ್ನು ಒಳಗೊಂಡು 9 ಜನ ಶಿಕ್ಷಕರಿಂದ ಒಂದು ಬಾಡಿಗೆ ಕೋಣೆಯಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ ತದನಂತರ 1995 ರಲ್ಲಿ ತನ್ನದೇ ಆದ ಹೊಸ ಕಟ್ಟಡವನ್ನ ನಿರ್ಮಿಸಲಾಯಿತು ಆ ಸಮಯದಿಂದ ಈ ಸಮಯದವರೆಗೆ ಐದು ದಶಕಗಳನ್ನ ಯಶಸ್ವಿಯಾಗಿ ಪೂರೈಸಿದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿ 50ರ ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತ್ತು.ಈ ಒಂದು ಕಾರ್ಯಕ್ರಮವನ್ನು ಶಾಂತಿಯ ಸಂಕೇತವಾದ ಪಾರಿವಾಳವನ್ನು ಹಾರಿಬಿಡುವುದರ ಜೊತೆಗೆ ಸಸಿಗೆ ನೀರುಣಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಸಿ ಎಸ್ ರಾಠೋಡ ವಹಿಸಿಕೊಂಡಿದ್ದರು . ಮುಖ್ಯ ಅತಿಥಿಗಳಾಗಿ ಶ್ರೀ ಬಿ ಎಸ್ ಪಠಾಣ ಮುಖ್ಯ ಆಡಳಿತ ಅಧಿಕಾರಿಗಳು ನಾಯಕ ಶಿಕ್ಷಣ ಸಂಸ್ಥೆ ವಿಜಯಪುರ. ಶ್ರೀ ಎಸ್ ಎಲ್ ಚಿಂತಾಮಣಿ . ಶ್ರೀ ವಿರೂಪಯ್ಯ ಬಾನಾಳಮಠ. ಶ್ರೀ ಆರ್ ಪಿ ಲಮಾಣಿ . ಶ್ರೀ ಚಂದ್ರಶೇಖರ ಹಡಪದ. ಮತ್ತು ಶಿಕ್ಷಣ ಸಂಸ್ಥೆಯ ಕಾಲೇಜು . ಪ್ರೌಢ ವಿಭಾಗ . ಪ್ರಾಥಮಿಕ ವಿಭಾಗದ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Apr 05, 2021 at 9:48 am

ಶಿಕ್ಷಣದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ವಿ. ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಇವರಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ.
ಹಳಿಯಾಳ -: 2017- 2023 ಇಸ್ವಿಯಲ್ಲಿ ತೇರ್ಗಡೆಯಾದ ಕಾರವಾರ ಜಿಲ್ಲೆಯ ವಿವಿಧ ತಾಲೂಕುಗಳನ್ನ ಆಯ್ಕೆ ಮಾಡಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಎಲ್ಲಿ ಹೆಚ್ಚಿನ ಅಂಕಗಳ ಪಡೆದ ವಿದ್ಯಾರ್ಥಿಗಳಿಗೆ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸಿ ಟಿ ಸಭಾಭವನದಲ್ಲಿ ಇಂದು ಸಂಸ್ಥಾಪಕರ ದಿನಾಚರಣೆ ಆಚರಿಸಿದರು ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಾಧಕರಿಗೆ ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಒಟ್ಟು 590000 ರೂಪಾಯಿಗಳ ಶಿಷ್ಯವೇತನವನ್ನು ಹಸ್ತಾಂತರಿಸಿದರು . ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು. ಮೊಹಮ್ಮದ್ ರೋಷನ್ ವ್ಯವಸ್ಥಾಪಕ ನಿರ್ದೇಶಕರು ಹೆಸ್ಕಾಂ ಕರ್ನಾಟಕ ಸರ್ಕಾರ ಹಾಗೂ. ಪ್ರಶಾಂತ್ ಆರ್ ದೇಶಪಾಂಡೆ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟೆಸ್ಟ್ ಮಾರ್ಗದರ್ಶಕರು ಈ ಕಾರ್ಯಕ್ರಮಕ್ಕೆ ಸಾಧನೆ ಮಾಡಿದ ವಿದ್ಯಾರ್ಥಿಗಳು ಪಾಲಕರು ಹಾಗೂ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.

Apr 05, 2021 at 9:48 am

ಬದುಕಲು ಕಲಿಸುವ ಎನ್‌ಎಸ್‌ಎಸ್ ಎಂಬ ಗರಡಿಮನೆ
ನಿಡಗುಂದಿ -: ಜೂ- 24 :- ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ಗ್ರಾಮೀಣ ವಿದ್ಯಾವರ್ಧಕ ಸಂಘದ ಶ್ರೀ ಎಂ ವಿ ನಾಗಠಾಣ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ನಿಡಗುಂದಿ ಹಾಗೂ ಸರ್ಕಾರಿ ಪ್ರೌಢಶಾಲೆ ಕಮದಾಳ ಇವರ ಸಂಯೋಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ನಾಲ್ಕನೇ ದಿನದ ಶ್ರಮದಾನ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಮತ್ತು ಸ್ವಯಂ ಪ್ರೇರಿತರಾಗಿ ಶಿಬಿರಾರ್ಥಿಗಳು ಶ್ರಮದಾನ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು ಮತ್ತು ಈ ಸೇವಾ ಯೋಜನೆ ಕಾರ್ಯಕ್ರಮದ ವಿಶೇಷತೆಯು ವೈವಿಧ್ಯಮಯವಾಗಿ ಕಂಡು ಬಂದಿದೆ ಅಲ್ಲಿನ ವೇದಿಕೆ, ಊಟೋಪಚಾರ, ಅಲಂಕಾರ, ಸ್ವಚ್ಛತೆ ಹೀಗೆ ಹಲವಾರು ಸಮಿತಿಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದವರು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು. ಇದು ಒಂದು ಉದಾಹರಣೆಯಷ್ಟೆ, ಇಂತಹ ನೂರಾರು ಕಾರ್ಯಕ್ರಮಗಳಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರ ಪರಿಶ್ರಮವಿರುತ್ತದೆ. ಅಷ್ಟರ ಮಟ್ಟಿಗೆ ಇದು ವಿದ್ಯಾರ್ಥಿಗಳ ಬದುಕನ್ನು ರೂಪಿಸಿರುತ್ತದೆ. ಈ ವಿಚಾರವನ್ನು ನೆನಪಿಸಲು ಇದು ಒಳ್ಳೆಯ ಸಂದರ್ಭವೆನಿಸುತ್ತದೆ. ಏಕೆಂದರೆ, ’ಸೇವೆಯ ಸವಿಜೇನ ಸವಿಯೋಣ ಬನ್ನಿ, ಸೇವೆಯ ಸವಿಜೇನ ಹಂಚೋಣ ಬನ್ನಿ’ ಎನ್ನುತ್ತಲೇ ಇಂದು ರಾಷ್ಟ್ರದಾದ್ಯಂತ ಯುವಜನತೆಯಲ್ಲಿ ಸೇವಾ ಮನೋಭಾವವನ್ನು ಬಿತ್ತುವಲ್ಲಿ ಯಶಸ್ವಿಯಾಗಿರುವ ರಾಷ್ಟ್ರೀಯ ಸೇವಾ ಯೋಜನೆಗೆ ನಲವತ್ತೈದರ ಸಂಭ್ರಮ. ಭಾರತವನ್ನು ರಾಮರಾಜ್ಯವನ್ನಾಗಿಸಲು ಯುವಪಡೆಯೊಂದು ಸಿದ್ಧಗೊಳ್ಳಬೇಕೆಂದು ಮಹಾತ್ಮಾ ಗಾಂಧೀಜಿಯವರು ಕಂಡಿದ್ದ ಕನಸನ್ನು ನನಸಾಗಿಸಲು ಯುವಜನತೆಯಲ್ಲಿ ಅದರಲ್ಲೂ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವಗುಣ, ಸಾಮಾಜಿಕ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಸರಕಾರವು ಸಿಯಾವುದ್ದೀನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುತ್ತದೆ. ಈ ಸಮಿತಿಯ ಶಿಪಾರಸ್ಸಿನೊಂದಿಗೆ ಗಾಂಧೀಜಿಯವರ ಜನ್ಮಶತಮಾನೋತ್ಸವದ ಸವಿನೆನಪಿಗಾಗಿ 1969ರಲ್ಲಿ ಈ ರಾಷ್ಟ್ರೀಯ ಸೇವಾ ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಗುತ್ತದೆ. ಅಂದಿನಿಂದ ಭಾರತದಾದ್ಯಂತ ಸೆಪ್ಟೆಂಬರ್ 24ನ್ನು ರಾಷ್ಟೀಯ ಸೇವಾ ಯೋಜನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಆರಂಭದಲ್ಲಿ ಕೆಲವೇ ಕೆಲವು ಕಾಲೇಜುಗಳಲ್ಲಿ ಅತ್ಯಲ್ಪ ಸ್ವಯಂ ಸೇವಕರನ್ನು ಒಳಗೊಂಡಿದ್ದ ಎನ್.ಎಸ್.ಎಸ್. ಇಂದು ರಾಷ್ಟಾದ್ಯಂತ ಮೂವತ್ತು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳ್ನು ಒಳಗೊಂಡು ವಿಶ್ವದಲ್ಲಿಯೇ ಸೇವಾ ವಲಯದಲ್ಲಿ ಅತೀ ಹೆಚ್ಚು ಸದಸ್ಯರನ್ನೊಳಗೊಂಡ ವಿದ್ಯಾರ್ಥಿ ಸಂಘಟನೆಯಾಗಿದೆ. ಪದವಿಪೂರ್ವ ವಿಭಾಗದಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವ ಎನ್.ಎಸ್.ಎಸ್. ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಎಲೆಮರೆಯ ಕಾಯಿಯಂತೆ ಕಾರ್ಯನಿವಹಿಸಿಕೊಂಡು ಬಂದಿದೆ. ತಾವು ವಾಸಿಸುವ ಸಮಾಜ ಅಥವಾ ಸಮುದಾಯದ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುವುದು, ಸಮಾಜದ ಅಗತ್ಯಗಳನ್ನು ಗುರುತಿಸಿ ಈ ಬಗ್ಗೆ ತಾವು ಏನು ಮಾಡಬಹುದೆಂದು ಆಲೋಚಿಸಿ ಸಾಮಾಜಿಕ ಹಾಗೂ ಪೌರ ಕರ್ತವ್ಯಗಳನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳಲು ಪ್ರಯತ್ನಿಸುವುದು, ಅಕ್ಷರಸ್ಥ ಮತ್ತು ಅನಕ್ಷರಸ್ಥರ ನಡುವಿನ ಅಂತರವನ್ನು ಕಡಿಮೆಗೊಳಿಸಲು ಯತ್ನಿಸುವುದು, ಕಲಿತ ವಿದ್ಯೆಯ ಫಲವನ್ನು ಪ್ರಚಲಿತ ಸಮಸ್ಯೆಗಳ ಪರಿಹಾರಕ್ಕೆ ಹೇಗೆ ಬಳಸಿಕೊಳ್ಳಬಹುದೆಂಬ ಅರಿವನ್ನು ಮೂಡಿಸುವುದು, ಪ್ರಕೃತಿ ವಿಕೋಪ, ಬೆಂಕಿ ಅನಾಹುತ ಮೊದಲಾದ ಸಂದರ್ಭಗಳಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಹೊಂದುವಂತೆ ಮಾಡುವುದು. ಮುಖ್ಯವಾಗಿ ಸಾಮಾಜಿಕ ಕುಂದುಕೊರತೆಗಳನ್ನು ತಮ್ಮ ಮಟ್ಟದಲ್ಲಿ ಪರಿಹರಿಸಿಕೊಳ್ಳಲು ಸ್ವತಃ ಕಾರ್ಯಪ್ರವೃತ್ತರಾಗುವಂತೆ ಮಾಡುವುದು. ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಧ್ಯೇಯವಾಗಿದೆ. ನಿರಂತರವಾಗಿ ಒಂದಿಲ್ಲೊಂದು ವಿಚಾರಕ್ಕೆ ಸಂಬಂಧಿಸಿದ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿ ಹಾಗೂ ವ್ಯಕ್ಕಿತ್ವ ರೂಪಿಸಲು ಸಹಕಾರಿಯಾಗಿದೆ. ಕಲಿಕಾ ಸಮಯದಲ್ಲಿ ವಿದ್ಯಾರ್ಥಿಯು ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಕೊಂಡು ಅಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಆತನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎನ್ನುವುದಕ್ಕೆ ಜೀವಂತ ನಿದರ್ಶನವೇ ಎನ್.ಎಸ್.ಎಸ್. ’ನನಗಲ್ಲ ನಿನಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ’ಸೇವೆಯ ಮೂಲಕ ಶಿಕ್ಷಣ – ಶಿಕ್ಷಣದ ಮೂಲಕ ಸೇವೆ’ ಎಂಬ ಮೂಲಮಂತ್ರವನ್ನು ಎನ್.ಎಸ್.ಎಸ್. ಹೊಂದಿದೆ. ನಮ್ಮ ಬದುಕಿಗೆ ಅಗತ್ಯವಾಗಿ ಬೇಕಿರುವ ಸಹಕಾರ, ಸೌಹಾರ್ದತೆ, ಭಾವೈಕ್ಯತೆಯನ್ನು ನಮ್ಮಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುತ್ತದೆ. ಎನ್.ಎಸ್.ಎಸ್ ಎನ್ನುವುದೊಂದು ಜೀವನ ಆದರ್ಶವಾಗಿದೆ ಎಂದರೆ ತಪ್ಪಾಗಲಾರದು. ಕಾಲೇಜಿನಲ್ಲಿ ಮಾತ್ರವಲ್ಲದೆ ಸಮಾಜದಲ್ಲೂ ಸಹಕಾರ, ಸೌಹಾರ್ದತೆಯನ್ನು ಉಳಿಸಿ ಬೆಳೆಸಿದಲ್ಲಿ ದೇಶ ಆಭಿವೃದ್ಧಿ ಪಥದತ್ತ ಸಾಗುವಲ್ಲಿ ಎರಡು ಮಾತಿಲ್ಲ. ಇವತ್ತಿನ ದಿನಗಳಲ್ಲಿ ಅಂಕಗಳ ವಿಚಾರದಲ್ಲಿ ವಿದ್ಯಾರ್ಥಿಗಳಿಗಿಂತ ಪೋಷಕರೇ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದನ್ನು ಗಮನಿಸಬಹುದು. ಉತ್ತಮ ಅಂಕಗಳು ಬರಬೇಕು ಎನ್ನುವುದು ನಿಜ. ಆದರೆ ಅಂಕಗಳೇ ಸರ್ವಸ್ವ ಎನ್ನುವ ನಡೆ ಸರಿಯಲ್ಲ. ತರಗತಿಯ ಪಾಠಗಳು ವಿದ್ಯಾರ್ಥಿಗಳನ್ನು ರೂಪಿಸುವ ಬಗೆ ಒಂದಾದರೆ, ಎನ್‌ಎಸ್‌ಎಸ್‌ನಂತಹ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ರೂಪಿಸುವ ವಿಧಾನವೇ ಬೇರೆ. ರಾ.ಸೇ.ಯೋಜನೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಉಳಿದ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿರುತ್ತಾರೆ. ತರಗತಿಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳುವ ರೀತಿಯು ಕೂಡ ಭಿನ್ನವಾಗಿರುತ್ತದೆ. ಎನ್.ಎಸ್.ಎಸ್. ಎಂಬುದು ಒಂದು ಬಯಲು ವಿಶ್ವವಿದ್ಯಾಲಯ. ಇಲ್ಲಿ ಪುಸ್ತಕ ಜ್ಞಾನದ ಜೊತೆಗೆ ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ಸ್ವಯಂ ಸೇವಕರು ಪ್ರತಿಫಲವಿಲ್ಲದೆ ಮಾಡುವ ಸೇವೆ ಆತ್ಮಸ್ಥೈರ‍್ಯವನ್ನು ಹೆಚ್ಚಿಸುತ್ತದೆ. ಇತ್ತೀಚಿಗೆ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿರುವದನ್ನು ಗಮನಿಸಬಹುದು. ಎನ್.ಎಸ್.ಎಸ್.ಗೆ ಸೇರುವುದರಿಂದಾಗುವ ಇನ್ನೊಂದು ಪ್ರಯೋಜನವೆಂದರೆ ಇಲ್ಲಿ ವಿದ್ಯಾರ್ಥಿಯು ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಬ್ಯುಜಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ದುಶ್ಚಟಗಳ ದಾಸನಾಗಲು ಸಾಧ್ಯವಿಲ್ಲ. ಎನ್‌ಎಸ್‌ಎಸ್ ಅದೆಷ್ಟೋ ಮಾದರಿ ಯೋಜನೆಗಳನ್ನು ಆರಂಭದ ದಿನಗಳಲ್ಲಿಯೇ ಹಾಕಿಕೊಂಡಿದೆ. ಉದಾಹರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ಚಾಲನೆ ನೀಡಿದ ಸ್ವಚ್ಛ ಭಾರತ್ ಅಭಿಯಾನದ ಕಲ್ಪನೆ ಎನ್‌ಎಸ್‌ಎಸ್‌ನ ಮೂಲ ಉದ್ದೇಶಗಳಲ್ಲಿ ಒಂದು ಎಂಬಂತೆ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಸ್ವಯಂಸೇವಕರ ನೆರವಿನೊಂದಿಗೆ ರಾ.ಸೇಯೋ. ಘಟಕಗಳು ವರ್ಷವಿಡೀ ಅನೇಕ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ರಾ. ಸೇ. ಯೋಜನೆ ಸ್ವಯಂಸೇವಕರ ಜೀವನವನ್ನೇ ಬದಲಿಸಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಸ್ವಯಂ ಸೇವಕರಾಗಿದ್ದಾಗ ಇಷ್ಟಪಟ್ಟು ಇನ್ನು ಕೆಲವರು ಕಷ್ಟ ಪಟ್ಟು ಮಾಡಿದ ಶ್ರಮಾದಾನ, ಕಾರ‍್ಯಕ್ರಮಗಳ ಆಯೋಜನೆ, ಯೋಜನಾಧಿಕಾರಿಗಳ ಮಾರ್ಗದರ್ಶನ ಎಲ್ಲವೂ ಇಂದು ನಮ್ಮನ್ನು ಒಬ್ಬ ಉತ್ತಮ ನಾಗರೀಕನನ್ನಾಗಿ ಮಾಡಿದೆ. ವಿದ್ಯಾರ್ಥಿ ಜೀವನವೆಂದರೆ ಓದು, ಪಾಠ, ಪ್ರವಚನ, ಪರೀಕ್ಷೆ ಮಾತ್ರವಲ್ಲ ಬದಲಿಗೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗಬೇಕು. ಈ ಕೆಲಸ ಕಾಲೇಜುಗಳಲ್ಲಿ ಎನ್. ಎಸ್. ಎಸ್ ಘಟಕದಿಂದ ಸಾಧ್ಯವಾಗುತ್ತಿದೆ. ನಾವು ನಮ್ಮ ವಿದ್ಯಾರ್ಥಿ ಜೀವನದಲ್ಲಿ ಬೇರೆ ಬೇರೆ ಮನೋಭಾವದವರನ್ನು ಕಂಡಿರುತ್ತೇವೆ. ಕೆಲವರು ಪಾಠ, ಪರೀಕ್ಷೆ, ಅಂಕಗಳನ್ನು ಪಡೆಯುವುದರಲ್ಲೇ ಮಗ್ನರಾಗಿರುತ್ತಾರೆ. ಮತ್ತೆ ಕೆಲವರು ವಿದ್ಯಾರ್ಥಿದೆಸೆಯಲ್ಲಿ ಇತರ ಚಟುವಟಿಕೆಗಳಲ್ಲೂ ಭಾಗಿಯಾಗಿ ವಿದ್ಯಾರ್ಥಿ ಜೀವನವನ್ನು ಸಾರ್ಥಕ ಗೋಳಿಸುತ್ತಾರೆ. ಕೇವಲ ಪಾಠ, ಪ್ರವಚಗಳಿಂದ ಜೀವನದಲ್ಲಿ ಯಶಸ್ಸು ಸಿಗಬಹುದೇ ಹೊರತು ಆನಂದವಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಿಯಮಾನುಸಾರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಮಾತ್ರ ’ಸ್ಟುಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್’ ಆಗಲು ಸಾಧ್ಯ. ಒಂದು ಬಾರಿ ರಾ.ಸೇ.ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆಂದರೆ, ಅಲ್ಲಿಂದ ಹೊರಬರುವುದೇ ಇಲ್ಲ. ಅಧಿಕೃತವಾಗಿ ಎನ್.ಎಸ್.ಎಸ್.ನ್ನು ಬಿಟ್ಟರೂ ಕೂಡಾ ಒಂದಲ್ಲಾ ಒಂದು ರೀತಿಯಲ್ಲಿ ಅವರು ಎನ್.ಎಸ್.ಎಸ್.ನೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ. ಏಕೆಂದರೆ, ಎನ್.ಎಸ್.ಎಸ್. ಅಂತಹ ಭಾಂದವ್ಯದ ಗಂಟನ್ನು ಬಿಗಿದುಬಿಡುತ್ತದೆ. ಒಂದು ಬಾರಿ ಪ್ರವೇಶ ಪಡೆದು ಎರಡು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಂಡರೆ 240 ಗಂಟೆಗಳಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ವಿವಿಧ ರೀತಿಯ ಮಾಹಿತಿ ಶಿಬಿರ, ರಸ್ತೆ ಸುರಕ್ಷತೆ, ಸ್ವಚ್ಛತೆ, ನಾಗರಿಕ ಪ್ರಜ್ಞೆಯ ಅರಿವು, ದತ್ತುಗ್ರಾಮ ಸ್ವೀಕಾರ, ಸ್ಥಳೀಯ ಶಾಲಾ ಕಾಲೇಜು, ದೇವಾಲಯಗಳ ಕಾರ‍್ಯಕ್ರಮಗಳಲ್ಲಿ ಭಾಗವಹಿಸುವಿಕೆ ಹೀಗೆ ಒಂದಲ್ಲ ಒಂದು ರಿತಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರಭುದ್ಧರಾಗುತ್ತಾರೆ. ಇನ್ನು ಎನ್.ಎಸ್.ಎಸ್. ನಲ್ಲಿ ವಾರ್ಷಿಕ ವಿಶೇಷ ಶಿಬಿರದ ಗೌಜಿ ಗಮ್ಮತ್ತೇ ಬೇರೆ, ಈ ಹಿಂದೆ ಹತ್ತು ದಿನಗಳ ವರೆಗೆ ನಡೆಯುತ್ತಿದ್ದ ಶಿಬಿರವನ್ನು ಕಾರಣಾಂತರಗಳಿಂದ ಇಂದು ಏಳು ದಿನಗಳ ಕಾಲ ನಡೆಸಲಾಗುತ್ತಿದೆ. ಯಾವುದಾದರೂ ಒಂದು ಹಳ್ಳಿಯ ಸರ್ಕಾರಿ ಶಾಲೆಯನ್ನು ಕೇಂದ್ರವನ್ನಾಗಿಟ್ಟುಕೊಂಡು, ಅಲ್ಲಿನ ಪರಿಸರದ ಸ್ವಚ್ಛತೆ, ಕೈತೋಟ ನಿರ್ಮಾಣ, ಆಟದ ಮೈದಾನದ ವಿಸ್ತರಣೆ, ಅಲ್ಲದೇ ಊರಿನ ಜನರಿಗೆ ಉಚಿತ ಮಾಹಿತಿ ಶಿಬಿರಗಳು, ಶಾಲಾ ಮಕ್ಕಳಿಗೆ ಕಾರ‍್ಯಕ್ರಮಗಳು ಆರೋಗ್ಯ ಶಿಬಿರ, ಅಗ್ನಿಶಮನ, ಉರಗ ಪ್ರದರ್ಶನ ಮುಂತಾದ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಒಂದು ದಿನ ಊರಿನ ಮನೆ ಮನೆಗೆ ತೆರಳಿ, ಅಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಅಧ್ಯಯನ ಮಾಡಿ ಆ ವರದಿಯನ್ನು ಸರಕಾರಕ್ಕೆ ಒಪ್ಪಿಸುವ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆಯಲಾಗುತ್ತದೆ ಶಿಬಿರದ ಮೇಲ್ವಿಚಾರಣೆಗೆ ಯೋಜನಾಧಿಕಾರಿಗಳು ಇರುತ್ತಾರಾದರೂ ಅಡುಗೆ ತಯಾರಿ ಲೆಕ್ಕಪತ್ರ ನಿರ್ವಹಣೆ, ಕಾರ‍್ಯಕ್ರಮಗಳ ಆಯೋಜನೆ ಎಲ್ಲವೂ ವಿದ್ಯಾರ್ಥಿಗಳಿಂದಲೇ ಅರ್ಧಾತ್ ಸ್ವಯಂಸೇವಕ/ಸೇವಕಿಯರಿಂದಲೇ ನಡೆಯುತ್ತದೆ. ಸೇವೆಯನ್ನೇ ಆಧಾರವನ್ನಾಗಿಸಿಕೊಂಡಿರುವ ಎನ್.ಎಸ್.ಎಸ್.ನ ಧ್ಯೇಯ ವಾಕ್ಯವೇ ಹಾಗೆ ’ನನಗಲ್ಲ ನಿನಗೆ’. ಎನ್‌ಎಸ್‌ಎಸ್‌ನ ಏಕದಿನ ಶಿಬಿರಗಳು ಸ್ವಯಂಸೇವಕರಲ್ಲಿ ಪ್ರಾರಂಭದಲ್ಲಿದ್ದ ಆತಂಕ, ಭಯವನ್ನು ದೂರ ಮಾಡಿದರೆ, ವಾರ್ಷಿಕ ವಿಶೇಷ ಶಿಬಿರಗಳು ಸ್ವಯಂಸೇವಕರಲ್ಲಿ ಹೊಂದಾಣಿಕೆ, ಸಹಬಾಳ್ವೆ, ಒಗ್ಗಟ್ಟು, ಕಾರ‍್ಯಕ್ರಮ ನಿರ್ವಹಣೆ, ಸಹಕಾರ, ಸೇವಾಮನೋಭಾವ ಕಲಿಸುವ ಜೊತೆಗೆ ನಮ್ಮಲ್ಲಿ ಸೃಜನಶೀಲತೆಯನ್ನು ಹುಟ್ಟುಹಾಕುತ್ತವ. ಅವಿಭಜಿತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಯುವಜನತೆಗೆ ಸಹಜೀವನದ, ಕೂಡುಕುಟುಂಬದ ಕಲ್ಪನೆಯೇ ಇಲ್ಲವಾಗಿದೆ. ರಾ. ಸೇ. ಯೋಜನಾ ಶಿಬಿರವು ವಸುದೈವಕುಟುಂಬಕಮ್ ಎಂಬ ಭಾರತೀಯ ತತ್ವವನ್ನು ಪ್ರಯೋಗಿಕವಾಗಿ ತೋರಿಸುತ್ತದೆ. ಶಿಬಿರದಲ್ಲಿ ಮುಂಜಾನೆಯಿಂದ ರಾತ್ರಿಯವರೆಗೆ ಮಾಡುವ ಎಲ್ಲಾ ಕೆಲಸಕಾರ‍್ಯಗಳು ಸಬಲ ಯುವಕರನ್ನು ನಿರ್ಮಿಸುವಲ್ಲಿ ಹಾಗೂ ಸ್ವಯಂಸೇವಕರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುತ್ತದೆ. ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುವ ಎನ್.ಎಸ್.ಎಸ್. ಎಲೆ ಮರೆಯ ಕಾಯಿಯನ್ನು ಬೆಳಕಿಗೆ ತರುವ ಕೆಲಸ ವಾರ್ಷಿಕ ಶಿಬಿರದಲ್ಲಿ ನಡೆಯುತ್ತದೆ.ಈ ಒಂದು ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಯೋಜನಾಧಿಕಾರಿಗಳು ಮತ್ತು ಶಿಬಿರಾರ್ಥಿಗಳು ಸಂತಸದಿಂದ ಶ್ರಮದಾನ ಕಾರ್ಯಕ್ರಮದಲ್ಲಿ ತೊಡಗಿರುವ ದೃಶ್ಯ ಕಂಡುಬಂದಿದೆ .

Apr 05, 2021 at 9:48 am

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ .
ರಾಷ್ಟ್ರೀಯ ಸೇವಾ ಯೋಜನೆ ನಾಯಕತ್ವ ಜವಾಬ್ದಾರಿ ಗೆ ಪ್ರೇರಣೆ ( ಪ್ರೊಫೆಸರ್ ಶ್ರೀ ಎಸ್ ಆರ್ ಬಿರಾದಾರ) ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ . ನಿಡಗುಂದಿ :- ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ಗ್ರಾಮೀಣ ವಿದ್ಯಾವರ್ಧಕ ಸಂಘದ ಶ್ರೀ ಎಂ ವ್ಹಿ ನಾಗಠಾಣ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ನಿಡಗುಂದಿ ಸರಕಾರಿ ಪ್ರೌಢಶಾಲೆ ಕಮದಾಳ ಇವರ ಸಂಯೋಗದಲ್ಲಿ ಪುನರ್ವಸತಿ ಕೇಂದ್ರವಾದ ಕಮದಾಳ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ನೆರವೇರಿತು.ಈ ಒಂದು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.ಈ ಒಂದು ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಎಸ್ ಜಿ ನಾಗಠಾಣ ಅಧ್ಯಕ್ಷರು ಗ್ರಾಮೀಣ ವಿದ್ಯಾವರ್ಧಕ ಸಂಘ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಾ ಎಮ್ ಎಲ್ ಉಗಲವಾಟ ಪ್ರಾಚಾರ್ಯ ಎಂ ವಿ ನಾಗಠಾಣ ಕಾಲೇಜು ನಿಡಗುಂದಿ.ಮುಖ್ಯ ಅತಿಥಿಗಳಾಗಿ ಶ್ರೀ ಪ್ರಭು ಸಿಂದಗಿ ಎಸ್ ಡಿ ಎಂ ಸಿ ಅಧ್ಯಕ್ಷರು ಕಮದಾಳ , ಅತಿಥಿಗಳಾಗಿ ಬಸವರಾಜ ವಂದಾಲ ಪಟ್ಟಣ ಪಂಚಾಯತಿಯ ಸದಸ್ಯರು, ಶ್ರೀ ಎಸ್ ಎಸ್ ಹೊಸಮನಿ ಸಹ ಶಿಕ್ಷಕರು ಜಿ ಎಚ್ಎಸ್ ಕಮದಾಳ, ಪಿ ಬಿ ಕೂಚಬಾಳ, ಶ್ರೀ ಎಸ್ ಆರ್ ಬಿರಾದಾರ, ಶ್ರೀ ಎನ್ ಎಸ್ ಕೂಚಬಾಳ, ಎ ಎಚ್ ಗುಂಡಿನಮನಿ,ಇನ್ನಿತರರು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.ಈ ಒಂದು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕಾಗಿ ಮಾತನಾಡಿದ ಉಪನ್ಯಾಸಕರಾದ ಶ್ರೀ ಎಸ್ ಆರ್ ಬಿರಾದಾರ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಹಾಗೂ ಕರ್ತವ್ಯಗಳ ಬಗ್ಗೆ ಮತ್ತು ಸಮಾಜದ ಸುಧಾರಣೆ ಮೇಲೆ ಯಾವ ರೀತಿ ಕಾರ್ಯಯೋಜನೆಗಳನ್ನ ಮಾಡಬೇಕು ಮತ್ತು ಸೇವೆಯ ಸಂದರ್ಭದಲ್ಲಿ ಯಾವುದೇ ರೀತಿ ಫಲ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವನೆಯಿಂದ ಪ್ರತಿಯೊಂದು ಕಾರ್ಯಗಳಲ್ಲಿ ತಮ್ಮನ್ನ ತಾವು ಸ್ವಯಂ ಪ್ರೇರಿತವಾಗಿ ತೊಡಗಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಹೇಳಿದರು ಅನಂತರ ಈ ಯೋಜನೆಯ ಇತಿಹಾಸವನ್ನು ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು , ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಸಾರ್ವಜನಿಕ ಸೇವಾ ಸಂಸ್ಥೆ. ಇದನ್ನು ನಡೆಸುವವರು ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ , ಗಾಂಧೀಜಿಯವರ ಶತವರ್ಷವಾದ ೧೯೬೯ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂಸ್ಥೆಯ ಮುಖ್ಯ ಉದ್ದೇಶವು ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ. ಈ ಸ್ವಯಂಪ್ರೇರಿತ ಸಂಸ್ಥೆಯ ಮೂಲ ತತ್ವವು ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ತ್ರನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡಂತಹ ಅನುಭವವನ್ನು ನೀಡುವುದು, ಹಾಗೂ ಇದರೊಂದಿಗೆ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳೆಸುವುದಾಗಿದೆ.ಎಂದು ತಮ್ಮ ಪ್ರಾಸ್ತಾವಿಕ ಮಾತುಗಳನ್ನು ನಾಡಿದರು.ಈ ಒಂದು ಕಾರ್ಯಕ್ರಮದ ನಿರೂಪಣೆಯನ್ನು ಕುಮಾರ ಆನಂದ ಹಾವೇಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಲು ಶ್ರೀ ಪ್ರೊಫೆಸರ್ ಎನ್ ಎಸ್ ಕೂಚಬಾಳ ಸ್ವಾಗತಿಸಿದರು ವಂದನಾರ್ಪಣೆಯನ್ನು ಕುಮಾರಿ ಸಾವಿತ್ರಿ ಕಡೂರು ಕಾರ್ಯಕ್ರಮವನ್ನು ವಂದಿಸಿದರು.

Apr 05, 2021 at 9:48 am


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img