logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.
Published By: ಸೋಮಶೇಖರ ಗೌಡ ಹಾವೇರಿ ಜಿಲ್ಲಾ ವರದಿಗಾರ
Last Updated Date:  24-Sep-2023
ಕಲಾಸುದ್ದಿ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯು ದಿನಾಂಕ :19-09-2023 ರಂದು ರಾಣೇಬೆನ್ನೂರ್ ತಾಲ್ಲೂಕಿನ ಮಾಕನೂರ್ ಗ್ರಾಮದಲ್ಲಿ ನಡೆಯಿತು. ಕಾರ್ಯದಲ್ಲಿ ರಾಣೇಬೆನ್ನೂರ್ ನ ಶಾಸಕರಾದ ಶ್ರೀ ಮಾನ್ಯ ಪ್ರಕಾಶ ಕೋಳಿವಾಡ್ ರವರು ಮತ್ತು ಜಿಲ್ಲಾ ಹಂತದ ಅಧಿಕಾರಿಗಳು ಭಾಗವಸಿದ್ದರು. ಉದ್ಘಾಟನೆ ಅದ್ದೂರಿಯಾಗಿ ನಡೆಯಿತು. ಆದರೆ ಹೆಚ್ಚಿನ ಖೋ ಖೋ ಪಂದ್ಯಗಳಲ್ಲಿ ಜಗಳಗಳೇ ಸಂಭವಿಸಿದ್ದು ದುರದೃಷ್ಟಕರ. ಕಷ್ಟ ಪಟ್ಟು ಮಕ್ಜಳನ್ನು ಆಟಕ್ಕೆ ಅಣಿಗೊಳಿಸಿ ಕರೆದುಕೊಂಡು ಬಂದರೆ, ಇಲ್ಲಿ ನಡೆದುದೆ ಬೇರೆಯಾಗಿತ್ತು. ಇವು ಇಲಾಖೆಯ ಕ್ರೀಡಾಕೂಟ ದ ಬದಲಾಗಿ ಸ್ವಂತ ಗ್ರಾಮದಲ್ಲಿ ನಡೆದ ಕ್ರೀಡಾಕೂಟದಂತೆ ಭಾಸವಾಗಿತ್ತು. ಇಲಾಖೆಯ ನಿಯಮಾವಳಿಗಳಿಗೆ ತಕ್ಕಂತೆ ನಡೆಯದೆ ಅವ್ಯವಸ್ಥೆ ಯ ಆಗರವಾಗಿತ್ತು. ಈಗಾಗಲೇ ಇದರ ಬಗ್ಗೆ ಜಿಲ್ಲೆಯ 2 or 3 ತಾಲೂಕಿನವರು ಹಾವೇರಿ ಜಿಲ್ಲಾ ಉಪನಿರ್ದೇಶಕರಿಗೆ ದೂರನ್ನು ನೀಡಲಾಗಿದೆ ಎಂಬ ಮಾಹಿತಿಯ ಜಾಡು ಹಿಡಿದಾಗ ಹಾನಗಲ್ ಶಿಗ್ಗಾಂವ್ ಮತ್ತು ಬ್ಯಾಡಗಿ ತಂಡಗಳ ಊರಿನವರು ದೂರು ದಾಖಲಿಸಿದ್ದು ತಿಳಿದುಬಂದಿದೆ. ದೂರು ಕೊಟ್ಟ ಹಾನಗಲ್ ತಾಲೂಕಿನ ಬ್ಯಾತನಾಳ ಗ್ರಾಮದವರನ್ನು ಸಂಪರ್ಕಿಸಿದಾಗ ನಮಗೆ ಅಂಪೈರ್ ರವರನ್ನು ಇಲಾಖೆಯವರಿಗೆ ಆಧ್ಯತೆ ಕೊಡದೆ ಹೊರಗಿನವರಿಂದ ಆಟ ಆಡಿಸಲಾಯಿತು. ಮಾಕನೂರ್ ಹಾಗೂ ಅಂಗರಗಟ್ಟಿ ತಂಡದ ನಡುವೆ ಹಣಾಹಣಿ ನಡೆದಾಗ ಅವರುಗಳು ಸಂಪೂರ್ಣ ಏಕಮುಖವಾಗಿ ತೀರ್ಪು ನೀಡಲಾಗಿದೆ. ನಮ್ಮ ತಂಡ ವಿಜಯಶಾಲಿ ಯಾಗುವಂತಿದ್ದರು ನಿರ್ಣಾಯಕರ ವ್ಯವಸ್ಥಿತ ಪಿತೂರಿಯಿಂದ ಸೋಲುವಂತಾಯಿತು. ಅದಕ್ಕೆ ಸಂಬಂಧಿಸಿದ video ಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಶಿಗ್ಗಾಂವ್ ಹಾಗೂ ಬ್ಯಾಡಗಿ ತಂಡದವರನ್ನು ಕೇಳಿದಾಗ ಅವರು ಸಹಿತ ಮೇಲಿನಂತೆ ದೂರು ಹೇಳಿದ್ದಲ್ಲದೆ. ಸವಣೂರ ತಾಲೂಕಿನ ತಂಡದಲ್ಲಿ ವಯಸ್ಸಿಗೆ ಮೀರಿದ ಮತ್ತು ಶಾಲೆಯಲ್ಲಿ ಇಲ್ಲದ ಮಕ್ಕಳನ್ನು ಹಾಕಿಕೊಂಡು ಆಡಿಸಿದ್ದು ಮುಂದಿನ ಪಂದ್ಯದಲ್ಲಿ ದೃಢಪಟ್ಟರೂ ಆ ತಂಡದ ವಿರುದ್ಧ ಕ್ರಮಕೈಗೊಳ್ಳದೆ ಬ್ಯಾಡಗಿ ತಾಲೂಕಿನ ತಂಡದಲ್ಲಿ ಆಡಿದ ಸುಮಾರು 4 ವಿದ್ಯಾರ್ಥಿಗಳನ್ನು ತೆಗೆಸಿ ಆಡಿಸಲಾಯಿತು. ಇದರಬಗ್ಗೆ ನ್ಯಾಯ ಕೇಳಿದರೆ, ನೀವು ಮೊದಲೇ ಅಬ್ಜೆಕ್ಷನ್ ಮಾಡಬೇಕಿತ್ತು. ಎಂದು ಪೊಲೀಸ್ ಪಿಎಸ್ಐ ರವರನ್ನು ಕರೆಯಿಸಿ ನಮ್ಮ ಹುಡುಗರ ಮೇಲೆ ದಬ್ಬಾಳಿಕೆ ಮಾಡಿಸಿರುತ್ತಾರೆ. ಬಂದ ಪಿಎಸ್ ಐ ನಮ್ಮನ್ಯಾಯಯುತವಾದ ಹೋರಾಟಕ್ಕೆ ಅಡ್ಡಿಪಡಿಸಿ ಗ್ರಾಮದ ಮಕ್ಕಳಿಗೆ ಬಾಯಿಗೆ ಬಂದಂತೆ ಬೈದುದಲ್ಲದೆ ಒಬ್ಬ ವಿದ್ಯಾರ್ಥಿಗೆ ಹೊಡೆದು ಶಿಕ್ಷಕರಿಗೆ ಬಾಯಿಗೆ ಬಂದಂತೆ ಮಾತನಾಡಿ ದೌರ್ಜನ್ಯದಿಂದ ನಮ್ಮನ್ನು ಮೈದಾನದ ಹೊರಗೆ ಹಾಕಿದ್ದಾರೆ ಎಂದು ತಿಳಿಸಿದರು. ಪಿಎಸ್ ಐ ಬಾಲಕನಿಗೆ ಹೊಡೆದಾಗ ಮಕ್ಕಳ ತಾಯಂದಿರು ಪ್ರತಿಭಟಿಸಿದಾಗ ತಾಯಂದಿರಿಗೂ ಮಹಿಳೆಯರನ್ನದೇ ಬಾಯಿಗೆ ಬಂದಂತೆ ಬೈದಿದ್ದಾರೆ. ಎಂದು ಊರ ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೆ ಶಿಗ್ಗಾಂ ವ್ ತಂಡದವರದು ನಿರ್ಣಾಯಕರ ತಪ್ಪಿನಿಂದ ನಮ್ಮ ತಂಡ ಸೋತಿದೆ ಎಂದು ದೂರಿದ್ದಾರೆ. ಅಲ್ಲದೆ ಬಾಲಕಿಯರ ಆಟದಲ್ಲೂ ಕೈ ಕೈ ಮಿಲಾಯಿಸಿ, ಹೊಡೆದಾಡಿದಂತಹ ಜಗಳಗಳು ನಡೆದಿವೆ. ಹೀಗಾಗಿ ದೂರುಗಾರರ ಪ್ರಮುಖ ಬೇಡಿಕೆ ಏನೆಂದರೆ ಜಿಲ್ಲಾ ಮಟ್ಟದ ಖೋ ಖೋ ಆಟಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಡಿಸದೆ, ತಂಡ ಗೆದ್ದಂತಹ ಊರಿನಲ್ಲಿ ಇಟ್ಟಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಲೋಕಲ್ ಪ್ರಭಾವದಿಂದ ನಮ್ಮ ತಂಡಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ಈ ಆಟಗಳನ್ನು ರದ್ದುಪಡಿಸಿ ಜಿಲ್ಲಾ ಹಂತದಲ್ಲಿ ನಡೆಸಿಕೊಡಬೇಕೆಂದು ವಿನಂತಿ ಮಾಡಿಕೊಂಡಿರುತ್ತಾರೆ. ಅಲ್ಲದೆ ಅಂದು ಹಾಜರಿದ್ದ ಪಿಎಸ್ ಐ ಮೇಲೆ ದೌರ್ಜನ್ಯ ಕೇಸು ದಾಖಲಿಸಬೇಕೆಂದು ಕೇಳಿಕೊಂಡಿರುತ್ತಾರೆ. ನ್ಯಾಯಯುತವಾಗಿ ಆಟ ಆಡಿಸಿದಾಗ ಮಾತ್ರ ಮತ್ತೆ ಮುಂದಿನವರ್ಷ್ ಪ್ರಯತ್ನ ಮಾಡಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ತಮಗೆ ಬೇಕಾದವರಿಗೆ ನಿರ್ಣಯ ಕೊಡುವಂತಿದ್ದರೆ ಮಕ್ಕಳಿಗೆ ಅನ್ಯಾಯ ಮಾ ಡಿದಂತಾಗುತ್ತದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ ಮಾನ್ಯ ಜಿಲ್ಲಾ ಉಪನಿರ್ದೇಶಕರು ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು ಸೂಕ್ತ ಕ್ರಮ ಕೈಗೊಂಡು ಮಕ್ಕಳಿಗೆ ನ್ಯಾಯ ಕೊಡಿದಸಬೇಕೆಂಬುದು ಶಿಕ್ಷಕರ ಕ್ರೀಡಾಭಿಮಾನಿಗಳ ಮಾನವೀಯಗಿದೆ.


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img