logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಹದವಿಟ್ಟು ತಿದ್ದಿ ತೀಡಿದ ಚಿತ್ತಾರಗಳು
Published By: Police World News
Last Updated Date:  21-Dec-2021
ಕಲಾಸುದ್ದಿ

ಹುಬ್ಬಳ್ಳಿಯ ಶ್ರೀ ವಿಜಯ ಮಹಾಂತೇಶ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸಿ.ಡಿ.ಜಟ್ಟೆಣ್ಣವರ ಕಲಾಯಾನ ಬಹು
ವಿಶೇಷವಾದದ್ದು.ಗೆರೆ ಬಣ್ಣಗಳೊಂದಿಗೆ ಆಟವಾಡಿದ,ಅಷ್ಟೇ ಗಂಭೀರವಾಗಿ ಚಿಂತನೆಗೊಳಪಡಿಸಿದ
ರೀತಿ,ನೀತಿ,ಅನನ್ಯವಾದದ್ದು.ಯಾವುದೇ ಮಾಧ್ಯಮವನ್ನು ಆರಿಸಿಕೊಂಡು ಚಿತ್ರ ಬರೆಯಲು ಕುಳಿತರೆಂದರೆ ಅಷ್ಟೇ
ಶಿಸ್ತುಬದ್ಧವಾಗಿ ರಚಿಸುವ,ಮನಸ್ಸು ಪೂರಕವಾಗಿ ಭಾವ ಸಂವೇದಿಸುವ,ನೋಡುಗನ ಎದೆಗೆ ಬೇಗ ಆಪ್ತವಾಗುವ,ಕೆಲವೊಮ್ಮೆ
ತಿರಸ್ಕೃತ ಭಾವದಿಂದ ಗ್ರಹಿಸುವ ಮನಸ್ಥಿತಿಗೆ ಬೇಸರವಾಗುವ,ಹೀಗೆ ಆಯಾ ನೋಡುಗನ ನೋಟದಲ್ಲಿ ಅರ್ಥ ವೈವಿಧ್ಯತೆಯನ್ನು
ವಿಶ್ಲೇಷಣೆಗೆ ಒಳಪಡುವ ರೀತಿಯಲ್ಲಿ ರೂಪ ತಾಳಿವೆ. ಕಾಲದನುಭವದ ಕೈಯೊಳಗೆ ಏನೇ ಕೊಟ್ಟರೂ ಮೂರ್ತರೂಪದ
ಕಲಾಕೃತಿಯೊಂದು ಅನುಭವ ಸಹಿತ ಸಿಹಿಯು ದೊರೆಯುತ್ತದೆ ಎಂಬ ಆತ್ಮಾಭಿಮಾನದ ಮಾತು ಸತ್ಯವೆನಿಸುತ್ತದೆ.
ಇವರ ಪ್ರಾರಂಭಿಕ ರೇಖಾಪ್ರಧಾನ ಕೇಂದ್ರಿತ ಕಲಾಕೃತಿಗಳನ್ನು ಗಮನಿಸಿದಾಗ ಗೆರೆಗಳಲ್ಲಿ ಸಮಾಧಾನ ಗ್ರಹಿಕೆಯ
ಹೊಳಹುಗಳಿಂದ ಕಣ್ಣ್ ಸೆಳೆದರೂ ಸಹ ಚಲಿಸುವ ಗುಣದ ಪ್ರಕ್ರಿಯೆ,ವಸ್ತು ವೈವಿಧ್ಯತೆಯ ನೋಟವನ್ನು ಬಹು ಆಕರ್ಷಣೆಯವಾಗಿ
ಮನ ಸೂರೆಗೊಳ್ಳುತ್ತದೆ.ಗೆರೆಯಲ್ಲಿ ಅರಳಿದ ಯುವತಿಯರ,ಜನಪದರ,ಹಳ್ಳಿ ಮತ್ತು ನಗರ ಬದುಕಿನ ವೈವಿಧ್ಯತೆಯ ವಿವಿಧ
ನೋಟಗಳು,ದೇಹ ಮನಸ್ಸು ಅಂಗಾಂಗಗಳ ಚಲನ ಕ್ರಿಯೆಯಲ್ಲಿ ಆಯಾ ವಸ್ತು ವಿಷಯದ ಪ್ರಸ್ತುತತೆಯನ್ನು ಅರ್ಥ ಸಹಿತವಾಗಿ
ತಿಳಿಯುವಂತೆ ಕಂಡುಬರುತ್ತವೆ.




ಹದಿನಾರರಿಂದ ಹದಿನೆಂಟು ವಯೋ ಮಿತಿಯಾಚೆಗಿನ ಪುರುಷ ಮತ್ತು ಸ್ತ್ರೀಯರ ರೇಖಾಚಿತ್ರಗಳು ಹತ್ತು ಹಲವು
ಚಿಂತನೆಗಳನ್ನು ಕಟ್ಟಿಕೊಡುತ್ತವೆ.ಎರಡು ಕೊಡಗಳ ಮಧ್ಯೆ ಕುಳಿತು ಮರದ ಪೊಟರೆಗೆ ಬೆನ್ನು ಹಚ್ಚಿ ಕಲ್ಲಿನ ಮೇಲೆ ಕುಳಿತ
ಯುವತಿಯು ತನ್ನ ತೆಳ್ಳನೆಯ ಕೈ ಬೆರಳ ಮುಖಾಮುಖಿಯಲ್ಲಿ ಸಮಯ ಪ್ರಜ್ಞೆಯ ಲೆಕ್ಕಾಚಾರವಿರಬಹುದೋ ಅಥವಾ
ಮನೆಯಾಚೆಗಿನ ರೆಕ್ಕೆ ಬಿಚ್ಚಿ ಹಾರುವ ತವಕವೋ ? ಎಂಬ ಅನೇಕ ದಾರಿಗಳ ತೆವಲನ್ನು ಸೂಚಿಸಿ ಹೇಳುವಂತಿದೆ.
ಮತ್ತೊಬ್ಬ ಯುವಕ ಡೋಲು ನುಡಿಸುತ್ತ ಹೋರಾಟ ಭಂಗಿ,ಇಬ್ಬರು ಯುವಕ ಯುವತಿಯರು ಹೀಗೆ
ನೂರಾರುಪ್ರಕಾರದ ರೇಖಾಚಿತ್ರಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕದ ತೆರೆಯನ್ನು ಪ್ರದರ್ಶಿಸಿ ದಂತಿದೆ.ಮತ್ತೆ
ರೇಖಾಪ್ರಧಾನವಲ್ಲದೆ ಕಪ್ಪು ,ಬಿಳುಪು,ಮಧ್ಯೆ ಅಲ್ಲಲ್ಲಿ ಕೆಂಪು ಹಳದಿ ನೀಲಿ ಬಣ್ಣಗಳ ಲೇಪನದೊಂದಿಗೆ ಕರಿ ಪೌಡರ್
ಮಾದರಿಯ,ಇದ್ದಿಲು ಕುಟ್ಟಿ ಪುಡಿ ಮಾಡಿ ಅದರ ಸಹಾಯವೆಂಬಂತೆ ಮೂಲ ಸ್ಟಮ್ಪಿಂಗ್ ಪುಡಿಯ ಚಿತ್ರಗಳಂತೆ ರಚಿಸಿದ ಹತ್ತಾರು
ಚಿತ್ರಕಲಾಕೃತಿಗಳು ಶೀರ್ಷಿಕೆ ರಹಿತವೆಂಬಂತೆ ಕಂಡರೂ ಸಹ ಅನೇಕ ಅರ್ಥಗಳ ಸಂಗಮವಾಗಿ
ಮುಖಾಮುಖಿಯಾಗುತ್ತವೆ.ಅದರಲ್ಲಿ ವಿಶೇಷವಾಗಿ ಮೂವರು ಪುರಷರಿರುವ ಮತ್ತು ಸುತ್ತಲೂ ನಾಯಿಗಳಿರುವ ಕೃತಿಯಲ್ಲಿ
ಕತ್ತಲು ಅವರಿಸಿಕೊಂಡ ಗಳಿಗೆಯಲ್ಲಿ ನಡೆದಾಡುವ ಮೂವರ ಪ್ರಯಾಣಕ್ಕೆ ನಾಯಿಗಳ ಅಡೆ ತಡೆ,ಅಷ್ಟೇ ಮುಗ್ದ ಬೆಕ್ಕುಗಳ
ಮಾತುಕತೆ ನಿಜಕ್ಕೂ ಮಾನವ ಕುಲದ ದೌರ್ಜನ್ಯದ ವಿರುದ್ದದ ಕಡೆ ಪ್ರತಿಭಟಿಸಿದಂತಿದೆ.ಇದೆ ಕಲಾಕೃತಿ ಮತ್ತೊಂದು
ಅರ್ಥವನ್ನು ವಿವರಿಸುವಂತೆ ಮಹಾತ್ಮಗಾಂಧಿಯ ತತ್ವ ವಿವೇಚನೆಯೊಂದಿಗೆ,ಸ್ವಾತಂತ್ರ್ಯ ಚಳುವಳಿಯ ಗೆಲುವಿನ ಹರ್ಷದಲ್ಲಿ
ಮೂಖ ಪ್ರಾಣಿಗಳ ಸಂಭ್ರಮವಿರಬಹುದೇ ? ಹೀಗೆ ಹಲವು ಅರ್ಥದ ನದಿಯಾಗಿ ಈ ಕಲಾಕೃತಿ ನೋಡುಗರೊಂದಿಗೆ
ಸಂವಾದಿಸುತ್ತದೆ.

ಅಮೂರ್ತ ತಲೆ ಬರಹದ ಕಲಾಕೃತಿಗಳ ರಚನೆಯಲ್ಲಿ ಹವಾಮಾನ ವೈಪರೀತ್ಯದ ಸವಾಲುಗಳನ್ನು
ಪ್ರತಿನಿಧಿಸುವ,ಮೋಡ ಮರೆಯ ನಿಧಾನದ ಇಬ್ಬನಿ ಸೂಚಕದ ಛಾಯೆಯನ್ನು ತಿಳಿಸುವ ನೆಲೆಯಲ್ಲಿ ಹಲವು ಸ್ಟಮ್ಪಿಂಗ ಪೌಡರ್
ಕಲಾಕೃತಿಗಳು ಗಮನಾರ್ಹ.ಪೌಡರ್ ರೂಪದ ಚಿತ್ರಗಳಲ್ಲಿ ಅಲಲ್ಲಿ ಕೆಂಪು ಮತ್ತು ನೀಲಿ ಬಣ್ಣಗಳು ಸಾಂದರ್ಭಿಕವಾಗಿ
ಲೇಪನಗೊಂಡಿವೆ.ಆದರೆ ಚಿತ್ರಕಲಾಕೃತಿಗಳ ರಚನಾ ತಂತ್ರಗಾರಿಕೆಯಲ್ಲಿ ಕಲಾವಿದನ ಬೌದ್ಧಿಕತೆ ಪ್ರಾಮಾಣಿಕ ಪ್ರಯತ್ನದ
ಹಾದಿಯನ್ನು ಸ್ಪಷ್ಟಪಡಿಸುತ್ತದೆ.
ಮತ್ತಲವೂ ಇದೆ ಪ್ರಕಾರದ ಚಿತ್ರಗಳಲ್ಲಿ ಬಹು ಕಾಡುವ ಒಂದು ಚಿತ್ರ ಇಬ್ಬರು ಪ್ರೇಮಿಗಳು ನಡೆವ ಹಾದಿಯಲ್ಲಿ ಅವರ
ಮುಂದಿನ ಬದುಕಿನ ಮುನ್ನೋಟ ಕಷ್ಟಕಾಲದ ಯಾತನೆ ಹೀಗಿರುವುದು ಎಂಬ ಸೂಚ್ಯವಾಗಿ ತಿಳಿಸಲು ಪ್ರಯತ್ನಿಸಿದಂತಹ
ಅನುಭವವನ್ನು ಪ್ರಸ್ತುತ ಪಡಿಸುವ ಕಲಾಕೃತಿಯೊಂದು ನಿರ್ಮಾಣವಾಗಿದೆ.ಅಲ್ಲದೆ ಬೆಕ್ಕು.ಕಾಗೆ.ನಾಯಿ.ಸೈಕಲ್ ಸವಾರಿ
ಯುವಕರು.ಇಬ್ಬರು ಯುವಕ ಯುವತಿಯರು,ಕೋಳಿ ಕಾಗೆಗಳ ಮಾತುಕತೆ,ಬೆಕ್ಕು ನಾಯಿ,ಮಾನವರೊಂದಿಗೆ ಮಾತಿಲ್ಲದ
ಪ್ರಾಣಿಗಳ ಸಂಯೋಜನೆ,ಎಲ್ಲವೂ ಅರ್ಥ ವಿವರಣ ಕೇಂದ್ರಿತ ಉತ್ತಮ ಕಲಾಕೃತಿಗಳೇ ಹೌದು.
ಇನ್ನೂ ಮೂರನೇ ಪ್ರಕಾರದ ಕಲಾಕೃತಿಗಳಾಗಿ ಅಬ್ಸಟ್ರ್ಯಾಕ್ ಟೈಟಲ್ ಕಲಾಕೃತಿಗಳ ನೋಡುವಿಕೆಯ ಅನುಭವ
ರಸವತಾದದ್ದು.ಕೆಂಪು.ಬಿಳಿ.ಹಸಿರು.ಕಪ್ಪು ಬಣ್ಣಗಳೊಂದಿಗೆ ಕಲಬೇರಿಕೆ ಶೈಲಿ,ಬ್ರೆಶ್ ಓಡಾಡುವ ರೀತಿ,ಕೈ ಬೆರಳ ಕಾವಿನ
ತೀಡುವಿಕೆ,ಹಸಿ ಬಣ್ಣದ ಮೇಲೆ ಪ್ಲಾಸ್ಟಿಕ್ ಸ್ಥಕ್ಚರ್ ತೆಗೆಯುವಿಕೆ,ಒಂದಾ ಎರಡಾ ನೂರು ವಿಧದ ಹೊಸ ರೂಪ ಕೊಟ್ಟು ಬಿಡಿಸಿದ
ಕಲಾಕೃತಿಗಳ ಮೆರಗು ಬಣ್ಣಿಸಲಾಗದು.ಕಲಾ ಬದುಕಿನ ಅನುಭವದ ಮಾರ್ಗವನ್ನೇ ಸೃಷ್ಟಿಸಿ ಹೊಸ ವಿಧಾನದ ತಿಳುವಳಿಕೆಯನ್ನು
ಕಲಾವಿದ ಗ್ರಹಿಸಿಕೊಂಡತಿದೆ.
ನಾಲ್ಕನೇ ಭಾಗವಾಗಿ ನೋಡುವ ಕಲಾಕೃತಿಗಳ ರಚನೆ ನಿಸರ್ಗ ಪ್ರೇರಿತವಾದವು.ಕಪ್ಪು ಕೆಂಪು ಕಲ್ಲಿನ ಬೆಟ್ಟವು
ನೀಲಿಮಯ ಆಕಾಶದ ಚೆಂದದ ಹೊಳಪು ಕಲಾವಿದನ ವಿಶಿಷ್ಟ ನೋಟದ ಮಾದರಿಯನ್ನೇ ತಿಳಿಸಿದಂತಿದೆ.ಬಾದಾಮಿ ಗುಹೆಯ
ಪರಿಕಲ್ಪನೆಯನ್ನು ಸಾರುವ ಒಂದೆರಡು ಕಲಾಕೃತಿಗಳು ನೋಡಲು ತುಂಬಾ ಸೊಗಸಾಗಿವೆ.
ಬಹುತೇಕ ಜಟ್ಟೆಣ್ಣವರ ಕಲಾ ವೈಶಿಷ್ಟ್ಯತೆಯನ್ನು ಸಾರುವ ಮಹತ್ವದ ಗುರುತುಗಳೆಂದರೆ ಆಯಿಲ್,ಡ್ರೈ,ಪೇಸ್ಟಲ್ಗಳ
ತುದಿಯಿಂದ ರಚನೆಯಾದ ಕಲಾಕೃತಿಗಳು.ಮಹಿಳೆ ಮತ್ತು ಪುರುಷರ ಮುಖಭಾವ,ಪೂರ್ಣ ಪ್ರಮಾಣದ ಚಿತ್ರಗಳನ್ನು
ನೋಡೋದಾಗ ಬಣ್ಣದ ತುಣುಕುಗಳ ಕಡ್ಡಿಯಂತಹ ಪೇಸ್ಟಲ್ಗಳನ್ನು ಹಾಳೆಗೆ, ಕ್ಯಾನವಾಸ್ ಗೆ ತಿದ್ದುವ,ಕೈ ಬೆರಳ ಕಾವು ಹೊಸ
ಮಾದರಿಯ ಚಿತ್ರಗಳನ್ನೇ ಸೃಷ್ಟಿ ಮಾಡಿದ ನೆನಪು ಕಲಾ ವಲಯ ಮರೆಯದೆ ಸದಾ ನೆನಪಿನಲ್ಲಿಟ್ಟು ಕೊಳ್ಳುವ ಹಾಗೆ ತನ್ನ
ಅಸ್ಮಿತೆಯನ್ನು ಮೆರೆದಿದ್ದಾರೆ.
ಯುವತಿಯ ಸೌಂದರ್ಯವಂತಿಕೆ ನಾಚಿ ನಿರಾಗುವ,ಬೇಗ ಅಪ್ಪಿಕೊಳ್ಳುವ, ನಗ್ನವಾಗಿರುವ ಯುವತಿಯ ಚಿತ್ರ
ಬಹುವಾಗಿ ಕಾಡುವ,ತಲೆಗೆ ಪಟಗ ಸುತ್ತಿಕೊಂಡು ನಡೆದ ವಯಸ್ಸಾಗಿರುವ ವೃದ್ಧನ ಚೆಲುವು,ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು
ಸಾರುವ ಮುಖಭಾವ ಚಿತ್ರ.ಸೀರೆ,ಕುಪ್ಪಸ,ಡ್ರೆಸ್,ತೊಟ್ಟ ಯುವತಿಯರ ಚಿತ್ರಗಳು ಆಕರ್ಷಕ ನೆಲೆಯಲ್ಲಿ ರಚನೆಯಾಗಿವೆ.
ಕಪ್ಪು.ಕೆಂಪು.ಬೂದು,ಹಳದಿ.ಬಿಳಿ ಇತ್ಯಾದಿ ಬಹು ಮಿಶ್ರವರ್ಣಗಳ ಬಳಕೆಯ ಪೇಸ್ಟಲ್ ಕಲಾಕೃತಿಗಳ ಚೆಲುವು ಕಲಾವಿದನ
ಹೆಗ್ಗಳಿಕೆಗೆ ಸಾಕ್ಷಿ.
ಈಗಾಗಲೇ ನೂರಾರು ಕಲಾಕೃತಿಗಳನ್ನು ರಚಿಸಿದ ಡಾ.ಸಿ.ಡಿ.ಜಟ್ಟೆಣ್ಣವರು ಪ್ರಾಯೋಗಿಕ ಕಾರ್ಯಗಳಷ್ಟೇ
ಮುಖ್ಯವಾಗಿ,ಸೈದ್ಧಾಂತಿಕವಾಗಿಯೂ ಅಷ್ಟೇ ಪ್ರಾಮುಖ್ಯತೆ ಯನ್ನು ಪಡೆದವರು, ಯಾಕೆಂದರೆ ಕರ್ನಾಟಕ ಚಿತ್ರಕಲಾ ಶಿಕ್ಷಣದಲ್ಲಿ
ಇತ್ತೀಚಿನ ಬೆಳವಣಿಗೆಯ ಕುರಿತಂತೆ ಕರ್ನಾಟಕ ವಿಶ್ವವಿದ್ಯಾಲಯ ದಿಂದ ಡಾಕ್ಟರೇಟ್ ಪದವಿ ಪಡೆದವರು.ಅಲ್ಲದೆ ಚಿತ್ರಕಲಾ
ಶಿಕ್ಷಣದ ಮತ್ತು ಕಲೆಯ ಕುರಿತಾದ ಹಲವು ಲೇಖನಗಳನ್ನು ಬರೆದ ಮಾಹಿತಿಯನ್ನು ಮುಕ್ತವಾಗಿ ತಿಳಿಸುತ್ತಾರೆ.ಕಲೆ.ಕಲಾವಿದ
ಕಲಾ ಶಿಕ್ಷಣ, ಪಾರಂಪರಿಕ, ಆಧುನಿಕ, ಸಮಕಾಲೀನ ಕಲೆಯ ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು
ನಿರಂತರವಾಗಿ ಕಲಾ ಲೋಕದಲ್ಲಿ ಪಯಣಿಸುತ್ತಿದ್ದಾರೆ ಹಾಗಾಗಿ ಅವರ ಕಲಾಕೃತಿಗಳ ರಚನಾ ಶೈಲಿ, ತಂತ್ರಗಾರಿಕೆ, ಯುವ
ಸಮುದಾಯದ ಮೇಲೆ ಪ್ರಭಾವಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆಗೊಳಪಡುವ ಕರ್ನಾಟಕ ದ ಮಹತ್ವದ ಕಲಾವಿದರು.

ವಿಮರ್ಶೆ : ಡಾ.ಬಸವರಾಜ ಎಸ್.ಕಲೆಗಾರ
ಸಹಾಯಕ ಅಧ್ಯಾಪಕರು
ದೃಶ್ಯಕಲಾ ಅಧ್ಯಯನ ವಿಭಾಗ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img