logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

"ರಂಗಾಯಣ ಮತ್ತು ನಿರ್ದೇಶಕ "
Published By: Police World News
Last Updated Date:  21-Dec-2021
ಕಲಾಸುದ್ದಿ

ರಂಗಾಯಣ ಮತ್ತು ನಿರ್ದೇಶಕರ ಆಸನವೆಂದರೆ ಅದಕ್ಕೊಂದು ಘನತೆ ಇದೆಯೆಂದು ಅರಿತವನು.
ಕಾರಂತರಿಂದ ಶುರುವುಗೊಂಡು ಪ್ರಸನ್ನ,ಜಂಬೆ,ಬಸೂ,ಹಳೆಮನೆ ಆದಿಯಾಗಿ ರಂಗಭೂಮಿ ಮತ್ತು
ರಂಗಾಯಣದ ಗೌರವವನ್ನು ವಿಶ್ವದೆತ್ತರಕ್ಕೆ ಕೊಂಡೊಯ್ದವರು.
ನನ್ನ ಪ್ರಕಾರ ರಂಗಭೂಮಿ ಪ್ರಜಾಸತ್ತಾತ್ಮಕವಾದುದು.ಆ ರೂಪದ ರಂಗಭೂಮಿ ಜನರ ನಾಡಿ
ಮಿಡಿತವಾಗಿ ಕಲೆಯ ರಸಾನುಭವ ಸೃಷ್ಟಿಸಿ  ನವ ಸಂವೇದನೆಗಳನ್ನು ಹುಟ್ಟು ಹಾಕಿ ಮನುಷ್ಯ
ಪ್ರೀತಿಯನ್ನು ಬಿತ್ತುವುದು.ಇದು ಅದರ ಉದ್ದೇಶವು ಹೌದು.
ಅಥವಾ 
ಪ್ರಭುತ್ವದ ವಿರುದ್ದ ರಂಗಭೂಮಿ ಜನರ ದನಿಯಾಗಿ ನಿಂತು ಜಾಗರ ಮೂಡಿಸುವುದು.
ಆದರೆ ವರ್ತಮಾನದ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪನವರು ಈ
ಮೌಲ್ಯಗಳನ್ನೆಲ್ಲ ಗಾಳಿಗೆ ತೂರಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. "ಬಹುರೂಪಿ" ಎಂಬ ಬಹುತ್ವ
ಸ್ವರೂಪದ ತಿರುಳನ್ನರಿಯದೆ ಏಕರೂಪಿ ಅವರ ವರ್ತನೆ ಖಂಡನೀಯವಾದು. ತಾನು ಮಾಡಿದ್ದೇ ಸರಿ
ಎಂಬ ಮೊಂಡುವಾದ ಅವರ ಧೂರ್ತತನಕ್ಕೆ ಸಾಕ್ಷಿಯಾಗಿದೆ. ಮಾತು ಮಾತಿಗೆ ಅವರು ಬಳಸುವ ಸಂಘ
ಪರಿವಾರದ ಧ್ಯೇಯ ಧೋರಣೆಗಳ ನುಡಿಗಟ್ಟು, ಎಡ ಬಲಗಳ ಅಪರಿಪಕ್ವತೆ ವಿಚಾರವು ನಿಮ್ಮ ರಂಗಭೂಮಿಯೆ?
ನನ್ನ ಮುವತ್ತು ವರ್ಷಗಳ ಸಾಂಸ್ಕೃತಿಕ ಬದುಕಿನಲ್ಲಿ ಇವರಂತೆ  ಯಾರೂ ಹೀಗೆ ಗೆರೆ ಕೊರೆದಂತೆ
ಎಡ ಬಲ ಜಾತಿ ಕೋಮುಗಳನ್ನು ತಂದು ನಿಲ್ಲಿಸಿದ್ದನ್ನು ಕಂಡಿಲ್ಲ. ಹಾಗೆ ನೋಡಿದರೆ ರಂಗಭೂಮಿಗೆ
ಜಾತಿ ಕುಲಗಳುಂಟೆ! ಅದೊಂದು ಸರ್ವರನ್ನು ಒಳಗೊಂಡ ಸಾಮುದಾಯಿಕ ಕಲೆ. ಇಂಥವೊಂದು 
ಪ್ರಾಥಮಿಕ ಜ್ಞಾನವು ಇರದಂತೆ ಕಾರ್ಯಪ್ಪನವರು ಅರಚಾಡುವುದು ಹೇಸಿಗೆಯೆನಿಸುತ್ತಿದೆ.
ಅವರು ಬೇಕಿದ್ದರೆ, ಬಲಪಂಥೀಯ ಚಿಂತನೆಯವರನ್ನೇ ಆಯ್ಕೆ ಮಾಡುವುದಿದ್ದರೆ ಮಾಡಲಿ.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ದಿಗ್ಗಜರಿದ್ದಾರೆ. ಸಂಸದ ಮತ್ತು ‌ಚಲನಚಿತ್ರ- ರಂಗನಟ ಪರೇಶ್ ರಾವಲ್ ಇದ್ದಾರೆ.
ಅನುಪಮ್ ಖೇರ್ ಇದ್ದಾರೆ. ಕರೆಯಿಸಲಿ! ಯಾರು ಬೇಡಂತಾರೆ!  ಆದರೆ ಸುಳ್ಳಾಡುವವರನ್ನು ಕರೆಯಿಸಿ
ರಂಗಭೂಮಿ ಮರ್ಯಾದೆಯನ್ನು ಯಾಕೆ ಹಾಳು ಮಾಡುತ್ತೀರಿ?ಅದ್ಯಾವ ಘನಂದಾರಿ ಕಾರ್ಯ
ಮಾಡಬೇಕೆಂದಿರುವಿರಿ ಕಾರ್ಯಪ್ಪನವರೆ! ಇಷ್ಟೆಲ್ಲ ನಡೆಯುತ್ತಿದ್ದರೂ ಹಲ್ಲಿಲ್ಲದ ಹಾವಿನಂತಿರುವ
ರಂಗಸಮಾಜದ ಸದಸ್ಯರೇನು ಮಾಡುತ್ತಿದ್ದಾರೆ? ಗಾಢ ನಿದ್ದೆಯಲ್ಲಿದ್ದಾರೆಯೆ? ಕೊನೆ ಪಕ್ಷ ಬುಸುಗುಡುವುದನ್ನಾದರೂ
ಮಾಡಿರಿ ಮಹಾನುಭಾವರೆ.
ಸರಕಾರಕ್ಕೆ ಒಂದು ಕಿವಿ ಮಾತು. 
ರಂಗಭೂಮಿಗೆ ಎಡ ಬಲ,ಜಾತಿ ಕೋಮು- ಬಿಜೆಪಿ,ಜೆಡಿಎಸ್,ಕಾಂಗ್ರೆಸ್ ಸರಕಾರಗಳೆಂಬ ಹಣೆ ಪಟ್ಟಿಯಿಲ್ಲ. 
ಅದು ಪರಿಶುದ್ಧ ರಂಗಭೂಮಿ ಅಷ್ಟೇ. ಅದರ ಘನತೆಯನ್ನು ಕಾಪಾಡಲು ಇಂದಿನ ಸರಕಾರವು ಆಯ್ಕೆ 
ಮಾಡಿರುವ ಗೌರವಾನ್ವಿತ ಅಡ್ಡಂಡ ಕಾರ್ಯಪ್ಪನವರನ್ನು ಕರೆಯಿಸಿ ಬುದ್ದಿಮಾತು ಹೇಳಿರಿ.
ರಂಗಭೂಮಿ ಮತ್ತು ರಂಗಾಯಣದ ಗೌರವ ಉಳಿಸಿರಿ.
ರಂಗಭೂಮಿಯಲ್ಲಿ ರಾಜಕೀಯ ಸಲ್ಲದು. ಇದು ಮನವಿ.


- ಡಾ.ಡಿ.ಎಸ್.ಚೌಗಲೆ
   ನಾಟಕಕಾರ-ಮಾಜಿ ರಂಗಸಮಾಜದ ಸದಸ್ಯ
.
.


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img