logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ನಮ್ಮ ಕರ್ನಾಟಕದ ನೆಲಮೂಲದ ; "ಹಸೆ ಚಿತ್ತಾರ ಜನಪದ ಕಲೆ"
Published By: Police World News
Last Updated Date:  23-Dec-2021
ಕಲಾಸುದ್ದಿ

ಜನಪದ ಚಿತ್ರಕಲೆಯಾಗಿ ಗುರುತಿಸಿಗೊಂಡ ಮಹಾರಾಷ್ಟ್ರದ ವರ್ಲಿ , ಬಿಹಾರದ ಮಧುಬನಿ ,
ಒರಿಸ್ಸಾದ ಸೊರಾ ಗೋವಾದ ಕಾವಿ ಹಾಗೂ ಮಂಡಲ ಕಲೆ,ಹಾಗೆ ನಮ್ಮ ಕನಾ೯ಟಕದ
ಜನಪದ ಹಸೆ ಚಿತ್ರಕಲೆಯು ಒಂದು.



ಕಲೆ ಪ್ರತಿಯೊಬ್ಬರಲ್ಲೂ ಹುದುಗಿರುವ ಚಿತ್ತಾಕರ್ಷಕ ರಸಸಂವೇದನೆ . ಭಾಷೆಗಳಿಗೆ ಲಿಪಿಯೇ
ಹುಟ್ಟದ ಕಾಲದಲ್ಲೇ ನಮ್ಮ ಜನಪದರು ಚಿತ್ರಕಲೆ ಮೂಲಕ ಸಂವಹನ ನಡೆಸಲು ಆರಂಭಿಸಿದರು .
ಸಹ್ಯಾದ್ರಿಯ ಘಟ್ಟಗಳ ಮಲೆನಾಡಿನ ತವರು ಭಾಗದಲ್ಲಿ ಇಂದಿಗೂ ಲಕ್ಷಾಂತರ ಮನೆಗಳಲ್ಲಿ
ಕಾಣಸಿಗುವ ಆಚರಣೆಗಳ ಕಲೆ ಹಸೆ ಚಿತ್ತಾರ ವಿಶಿಷ್ಟ ವಿನ್ಯಾಸದ್ದು , ಅನನ್ಯವಾದುದು ಆಗಿದ್ದು
ಶಿಷ್ಟಚಿತ್ರಕಲೆ ತನ್ನದೇ ಸಾಂಪ್ರದಾಯಿಕ ಅಂತಃಸತ್ವ ಉಳಿಸಿಕೊಂಡಿರುವ ಜನಪದರ ಚಿತ್ರಕಲೆಗಳನ್ನು
ಅಕ್ಷರ ಕಲಿತವರು ಕಡೆಗಣಿಸಿದ್ದೆ ಹೆಚ್ಚು ಹಾಗಾಗಿ ಈವರೆಗೂ ಕರ್ನಾಟಕದ್ದೆ ಆದ ನೆಲಮೂಲದ
ಹಸ ಚಿತ್ತಾರದ ಸಾಮಾನ್ಯವಾಗಿ ಇಂದಿಗೂ ಮಲೆನಾಡಿ ನಲ್ಲಿ ಮಾತ್ರ ಕಂಡುಬರುವ ದೀವರರಲ್ಲಿನ
ಮದುವೆ ಸಂದರ್ಭಗಳಲ್ಲಿ , ಹಬ್ಬಗಳಲ್ಲಿ ಮದುಮಕ್ಕಳು ಕೂರುವ ಸ್ಥಳದಲ್ಲಿನ ಹಿಂಭಾಗದ ಗೋಡೆಯ
ಮೇಲೆ ಬರೆ ಯುವ , ಎಳೆ  ಎಳೆಯುವುದರಿಂದಲೇ ಮೂರ್ತ ರೂಪತಳೆಯುವ ದೈವೀಭಾವದ ಶಾಸ್ತ್ರ
ಕಲೆಯೇ ಹಸೆಚಿತ್ತಾರ ಆಗಿದೆ . ಮಲೆಕರ್ನಾಟಕದ ದೀವರ ಜನಾಂಗದ ಮಹಿಳೆಯರು ಹಸೆಚಿತ್ತಾರದಲ್ಲಿ
ಬಳಸುವ ಬಣ್ಣಗಳು ಅಪ್ಪಟ ನೈಸರ್ಗಿಕ ಮೂಲದಿಂದ ಅವುಗಳ ಆಧಾರದ ಮೇಲೆ ಇವುಗಳನ್ನು
ಮೂರು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಕೆಮ್ಮಣ್ಣನನ್ನು ಪ್ರಮುಖವಾಗಿ ಬಳಸಿದರೆ ಕೆಂಪು ಹಸೆ,
ಇದ್ದಿಲನ್ನು ಬಳಸಿ ಕಪ್ಪು ಹಸೆ, ಅಕ್ಕಿ ಹಿಟ್ಟು ಉಪಯೋಗಿಸಿದರೆ ಬಿಳಿಹಸೆ. ಇವುಗಳ ಜೊತೆಯಲ್ಲಿ
ಹಸೆಯನ್ನು ರಂಗುಗೊಳಿಸಲು ಅರಿಸಿನ, ಹಾಲು, ಸುಣ್ಣ, ಕಾರೆಕಾಯಿ, ಗುರಗೆಕಾಯಿಗಳನ್ನು ಬಳಸಿ
ನೈಸರ್ಗಿಕ ಬಣ್ಣಗಳನ್ನು. ಹಸೆ ಚಿತ್ತಾರಗಳನ್ನು ಮೂಡಿಸಲು ಬಳಸುವ ಬ್ರಷ್ ಸಹ ಹುಲ್ಲು ಮತ್ತು
ನಾರಿನದಾಗಿದೆ. 



ಗೋಡೆಯ ಮೇಲೆ , ಬುಟ್ಟಿಗಳು , ಬಾಗಿಲು , ಕಿಟಕಿ , ಇಡುಕಲು , ಮಡಕೆ ಇವುಗಳ ಮೇಲೆ ಸಸ್ಯಜನ್ಯ
ಮೂಲದ ಬಣ್ಣಗಳಿಂದ ಶುಭಸಂದರ್ಭಗಳಲ್ಲಿ ಆಕರ್ಷಕ ರೀತಿಯಲ್ಲಿ ಚಿತ್ತಾರ ಬಿಡಿಸುತ್ತಾರೆ .
ಚಿತ್ರಿಸಲು ಬೇಕಾದ ಬಣ್ಣಗಳನ್ನು ಆಯಾಕಾಲದಲ್ಲಿ ಅವರೇ ತಯಾರಿಸಿಕೊಳ್ಳುವರು .
ಈ ಕಲೆಯನ್ನು ದೀವರರ ಮಹಿಳೆಯರ ಹಸೆ ಚಿತ್ತಾರ ವೆಂದೇ ಗುರುತಿಸಲಾಗಿದೆ .
ಮಲೆನಾಡಿನ ಹಸಚಿತ್ತಾರ | ಬುಡಕಟ್ಟು ಸಂಸ್ಕೃತಿಯ ಅತಿ ಪುರಾತನ ಕಲೆಯಾಗಿದ್ದು
ಉಳಿಸುವ ಬೆಳೆಸುವ ನಮ್ಮೆಲ್ಲರ ಕರ್ತವ್ಯವಾಗಿದೆ ಯಾಕಂದ್ರೆ ? ಜನಪದ ಕಲೆಯು
ನಮ್ಮ ಪರಂಪರೆಯ ಸಂಸ್ಕೃತಿಯ ಪ್ರತೀಕ .
















- ಉಮೇಶ್ ಪತ್ತಾರ
ಚಿತ್ರಕಲಾವಿದರು & ಬರಹಗಾರರು
ಸಿಂಧನೂರು,ರಾಯಚೂರು


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img