logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಗದಗ ಜಿಲ್ಲೆಯ ನರಗುಂದದಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾಕೂಟ
Published By: ಬಸವರಾಜ ಪಾಟೀಲ್ ಜಿಲ್ಲಾ ವರದಿಗಾರ
Last Updated Date:  15-Oct-2022
ಕಲಾಸುದ್ದಿ

ಗದಗ ಜಿಲ್ಲೆಯ ನರಗುಂದದಲ್ಲಿ  ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾಕೂಟ/ ಯೋಗ ವನ್ನು ಒಳಗೊಂಡ ಏಕೈಕ ದೇಶೀ ಆಟ ಕಬಡ್ಡಿ -ಸಚಿವ ಸಿ ಸಿ ಪಾಟೀಲ್ ಅಭಿಮತ .     ಇಂದಿನ  ದಿನಮಾನಗಳಲ್ಲಿ ಯುವಕರು ವಾಟ್ಸ್ಸಫ್, ಫೇಸ್ಬುಕ್, ಟ್ವಿಟ್ಟರ್ ಇವೆ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ  ಹೆಚ್ಚಿನ ಆಸಕ್ತಿ ಹೊಂದಿದ್ದು ದೇಶಿಯ ಆಟಗಳಲ್ಲಿ ಆಸಕ್ತಿ ಇಲ್ಲದೆ ಇರುವುದು ನಿಜಕ್ಕೂ ವಿಷಾದನೀಯ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಗದಗ ಜಿಲ್ಲೆಯ ನರಗುಂದ್ ಪಟ್ಟನದಲ್ಲಿ ನೆಡೆದ ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾ ಕೂಟ ಉದ್ದೇಶಿಸಿ ಅಭಿಪ್ರಾಯ ವ್ಯಕ್ತ ಪಡಿಸಿದರು.      ನರಗುಂದ ತಾಲೂಕ ಕ್ರೀಡಾಗನದಲ್ಲಿ ಆಯೋಜಿದ್ದ ಕರ್ನಾಟಕ ಆಮೇಚೂರ್ ಕಬಡ್ಡಿ ಅಶೋಸಸಿಯೇಷನ್, ಭಾರತೀಯ ಜನತಾ ಪಾರ್ಟಿ ವಿಧಾನ ಸಭಾ ಮತಕ್ಷೇತ್ರ, ಲಾಯೆನ್ಸ್ ಕ್ಲಬ್, ಹಾಗೂ ಸಿ. ಸಿ ಪಾಟೀಲ್ ಅಭಿಮಾನಿ ಬಳಗ ಇವರ ಆಶ್ರಯದಲ್ಲಿ ನೆಡೆದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ಯಶಸ್ವಿ ಆಗಲು ಹಗಲಿರುಳು ಶ್ರಮಿಸಿದ ಸಂಘಟಕರಿಗೆ ಹಾಗೂ ಬಿಜೆಪಿ ಕಾರ್ಯ ಕರ್ತರಿಗೆ ಅಭಿನಂದನೆಗಳು ಸಲ್ಲಿಸಿದರು. ಈ ಒಂದು ಕಬಡ್ಡಿ ಕ್ರೀಡಾ ಕೂಟ ವನ್ನು ರೋಣ ಶಾಸಕ ಕಳಕಪ್ಪ ಬಂಡಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇವರನ್ನು ಸನ್ಮಾನ ಮಾಡಲಾಯಿತು. ಅರ್ಜುನ್ ಪ್ರಶಸ್ತಿ ವಿಜೇತ ಸಿ ಹೊನ್ನಪ್ಪಗೌಡ, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಎಸ್ ವಿ ಸಂಕನೂರ್,ಸೇರಿದಂತೆ 10 ಸಾವಿರ ಕ್ಕಿಂತ ಹೆಚ್ಚು ಕ್ರೀಡಾ ಅಭಿಮಾನಿಗಳು ಭಾಗವಸಿದ್ದರು. ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ಪುರುಷರ ವಿಭಾಗದಲ್ಲಿ 35 ತಂಡಗಳು ಭಾಗವಹಿಸಿದ್ದಾರೆ ಹಾಗೇ ಮಹಿಳಾ ವಿಭಾಗದಲ್ಲಿ 30 ತಂಡಗಳು ಭಾಗವಹಿಸಿದ್ದವು. ಕರ್ನಾಟಕ ಅಷ್ಟೇ ಅಲ್ಲದೆ ನೆರೆಯ ಗುಜರಾತ್, ಹರಿಯಾಣ, ದೆಹಲಿ, ಹಿಮಾಚಲ್ ಪ್ರದೇಶ, ತಮಿಳುನಾಡು, ಮಹರಾಷ್ಟ್ರ, ಆಂಧ್ರಪ್ರದೇಶ, ಸೇರಿದಂತೆ  ಭಾರತೀಯ ಸೇನಾ ತಂಡ ಹಾಗೂ ರೈಲ್ವೆ ತಂಡಗಳು ಭಾಗವಹಿಸದ್ದವು.ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಹಿಮಾಚಲ್ ಪ್ರದೇಶ, ದ್ವಿತೀಯ ಸ್ಥಾನ ರೆಡ್ ಆರ್ಮಿ ದೆಹಲಿ,ತೃತೀಯ ಸ್ಥಾನ ಹರಿಯಾಣ ಹಾಗೂ ಚತುರ್ಥ ಸ್ಥಾನ ಚೆನ್ನೈ ತಂಡ ಪಡೆದುಕೊಂಡವು.  ಹಾಗೇ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಹರಿಯಾಣ, ದ್ವಿತೀಯ ಸ್ಥಾನ ಹರಿಯಾಣ, ತೃತೀಯ ಸ್ಥಾನ ಹಿಮಾಚಲ್ ಪ್ರದೇಶ ಹಾಗೂ ಚತುರ್ಥ ಸ್ಥಾನ ಹರಿಯಾಣ ತಂಡ ಪಡೆದುಕೊಂಡವು.                ವಿಶೇಷ ವರದಿ - ಬಸವರಾಜ ಆರ್ ಪಾಟೀಲ್ ಗದಗ


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img